<p>ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎನ್) ಕರ್ನಾಟಕ ವೃತ್ತದ ಆಶ್ರಯದಲ್ಲಿ ನಡೆಯುತ್ತಿರುವ 11ನೇ ಅಖಿಲ ಭಾರತ ಬಿಎಸ್ಎನ್ಎಲ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು.<br /> <br /> ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ 6-0 ಗೋಲುಗಳಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸುಲಭ ಗೆಲುವು ಪಡೆಯಿತು. ಮುದಸ್ಸಿರ್ ಅಹ್ಮದ್ (5 ಮತ್ತು 15ನೇ ನಿಮಿಷ) ಆತಿಥೇಯ ತಂಡಕ್ಕೆ ಎರಡು ಗೋಲುಗಳನ್ನು ತಂದಿತ್ತರು.<br /> <br /> ಇತರ ಗೋಲುಗಳನ್ನು ಮೋತಿಲಾಲ್ ರಾಥೋಡ್ (8), ಮೊಹಮ್ಮದ್ ನಜೀಮ್ (22), ಫೆಲಿಕ್ಸ್ ಅಲ್ವಿನ್ (40) ಹಾಗೂ ಎಂ.ಎ. ವಿನೋದ್ ಚೆಂಗಪ್ಪ (43) ಗಳಿಸಿದರು. ಜಮ್ಮು ಮತ್ತು ಕಾಶ್ಮೀರ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.<br /> <br /> ಕರ್ನಾಟಕ ತಂಡ ನಾಲ್ಕರಘಟ್ಟದ ಪಂದ್ಯದಲ್ಲಿ ಒಡಿಶಾ ವಿರುದ್ಧ ಪೈಪೋಟಿ ನಡೆಸಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಒಡಿಶಾ 5-0 ರಲ್ಲಿ ಎಂಟಿಎನ್ಎಲ್ ನವದೆಹಲಿ ವಿರುದ್ಧ ಸುಲಭ ಗೆಲುವು ಪಡೆಯಿತು. ಅನುರಂಜನ್ ಎಕ್ಕಾ (2), ಎಸ್.ಎ.ಎ. ಫಹೀಮ್ (4), ನಾರಾಯಣ ಮೊಹಂತಿ (10), ರಬಿಬರ್ ಎಕ್ಕಾ (25) ಮತ್ತು ಮಾಗಾ ಮುಂಡ (40) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. <br /> <br /> ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಾರ್ಖಂಡ್ ಮತ್ತು ಎನ್ಟಿಆರ್ ನವದೆಹಲಿ ತಂಡಗಳು ಎದುರಾಗಲಿವೆ. ಜಾರ್ಖಂಡ್ 5-0 ಗೋಲುಗಳಿಂದ ಪಂಜಾಬ್ ವಿರುದ್ಧ ಜಯ ಪಡೆಯಿತು. ನವದೆಹಲಿಯ ಎನ್ಟಿಆರ್ ತಂಡ 4-1 ರಲ್ಲಿ ತಮಿಳುನಾಡು ತಂಡವನ್ನು ಮಣಿಸಿತು. <br /> <br /> ಸೆಮಿಫೈನಲ್ ಪಂದ್ಯಗಳು ಮಂಗಳವಾರ ಬೆಳಿಗ್ಗೆ ನಡೆಯಲಿವೆ. ಫೈನಲ್ ಪಂದ್ಯ ಮಧ್ಯಾಹ್ನ 3.00 ಗಂಟೆಗೆ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎನ್) ಕರ್ನಾಟಕ ವೃತ್ತದ ಆಶ್ರಯದಲ್ಲಿ ನಡೆಯುತ್ತಿರುವ 11ನೇ ಅಖಿಲ ಭಾರತ ಬಿಎಸ್ಎನ್ಎಲ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು.<br /> <br /> ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ 6-0 ಗೋಲುಗಳಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸುಲಭ ಗೆಲುವು ಪಡೆಯಿತು. ಮುದಸ್ಸಿರ್ ಅಹ್ಮದ್ (5 ಮತ್ತು 15ನೇ ನಿಮಿಷ) ಆತಿಥೇಯ ತಂಡಕ್ಕೆ ಎರಡು ಗೋಲುಗಳನ್ನು ತಂದಿತ್ತರು.<br /> <br /> ಇತರ ಗೋಲುಗಳನ್ನು ಮೋತಿಲಾಲ್ ರಾಥೋಡ್ (8), ಮೊಹಮ್ಮದ್ ನಜೀಮ್ (22), ಫೆಲಿಕ್ಸ್ ಅಲ್ವಿನ್ (40) ಹಾಗೂ ಎಂ.ಎ. ವಿನೋದ್ ಚೆಂಗಪ್ಪ (43) ಗಳಿಸಿದರು. ಜಮ್ಮು ಮತ್ತು ಕಾಶ್ಮೀರ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.<br /> <br /> ಕರ್ನಾಟಕ ತಂಡ ನಾಲ್ಕರಘಟ್ಟದ ಪಂದ್ಯದಲ್ಲಿ ಒಡಿಶಾ ವಿರುದ್ಧ ಪೈಪೋಟಿ ನಡೆಸಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಒಡಿಶಾ 5-0 ರಲ್ಲಿ ಎಂಟಿಎನ್ಎಲ್ ನವದೆಹಲಿ ವಿರುದ್ಧ ಸುಲಭ ಗೆಲುವು ಪಡೆಯಿತು. ಅನುರಂಜನ್ ಎಕ್ಕಾ (2), ಎಸ್.ಎ.ಎ. ಫಹೀಮ್ (4), ನಾರಾಯಣ ಮೊಹಂತಿ (10), ರಬಿಬರ್ ಎಕ್ಕಾ (25) ಮತ್ತು ಮಾಗಾ ಮುಂಡ (40) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. <br /> <br /> ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಾರ್ಖಂಡ್ ಮತ್ತು ಎನ್ಟಿಆರ್ ನವದೆಹಲಿ ತಂಡಗಳು ಎದುರಾಗಲಿವೆ. ಜಾರ್ಖಂಡ್ 5-0 ಗೋಲುಗಳಿಂದ ಪಂಜಾಬ್ ವಿರುದ್ಧ ಜಯ ಪಡೆಯಿತು. ನವದೆಹಲಿಯ ಎನ್ಟಿಆರ್ ತಂಡ 4-1 ರಲ್ಲಿ ತಮಿಳುನಾಡು ತಂಡವನ್ನು ಮಣಿಸಿತು. <br /> <br /> ಸೆಮಿಫೈನಲ್ ಪಂದ್ಯಗಳು ಮಂಗಳವಾರ ಬೆಳಿಗ್ಗೆ ನಡೆಯಲಿವೆ. ಫೈನಲ್ ಪಂದ್ಯ ಮಧ್ಯಾಹ್ನ 3.00 ಗಂಟೆಗೆ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>