<p><strong>ಬೆಂಗಳೂರು: </strong>ಸ್ಥಳೀಯ ಪ್ರತಿಭೆಗಳಾದ ಸ್ಫೂರ್ತಿ ಶಿವಲಿಂಗಯ್ಯ ಹಾಗೂ ಶರ್ಮದಾ ಬಾಲು ಸೋಮವಾರ ಆರಂಭವಾಗುವ ಕ್ಯೂನೆಟ್ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪ್ರಬಲ ಸವಾಲನ್ನು ಎದುರಿಸಲಿದ್ದಾರೆ.<br /> <br /> ನಗರದ ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಪಂದ್ಯಗಳು ನಡೆಯಲಿವೆ. 25,000 ಡಾಲರ್ ಬಹುಮಾನ ಹೊಂದಿರುವ ಈ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಫೂರ್ತಿ ಜರ್ಮನಿಯ ಮೈಕೆಲಾ ಫ್ರಾಲಿಕಾ ಜೊತೆ ಕಣಕ್ಕಿಳಿಲಿದ್ದಾರೆ. ಈ ಜೋಡಿ ಇಸ್ರೇಲ್ನ ಡೇನಿಜ್ ಕಜುನಿಕು ಮತ್ತು ಚೀನಾದ ಯಾ ಜಾವೊ ಸವಾಲನ್ನು ಎದುರಿಸಲಿದ್ದಾರೆ.<br /> <br /> ಬೆಂಗಳೂರಿನ ಇನ್ನೊಬ್ಬ ಆಟಗಾರ್ತಿ ಶರ್ಮದಾ ಡಬಲ್ಸ್ನಲ್ಲಿ ಸೆದಾ ಅರಂತೆಕಿನ್ ಜೊತೆ ಆಡಲಿದ್ದಾರೆ. ಇವರು ಕೊರಿಯಾದ ಸುಂಗ್ ಹೇಯ್ ಹನ್ ಹಾಗೂ ಇಸ್ರೇಲ್ನ ಕೇರನ್ ಶಲಾಮೊ ಎದುರು ಆಡಲಿದ್ದಾರೆ. <br /> <br /> ಭಾರತದ ಪ್ರೇರಣಾ ಭಾಂಬ್ರಿ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ತಮರ್ಯಾನ್ ಹೆಂಡ್ಲೆರ್ ಜೊತೆ ಸೆಣಸಲಿದ್ದಾರೆ. ತವರು ನೆಲದಲ್ಲಿಯೇ ಈ ಟೂರ್ನಿಯ ನಡೆಯಲಿರುವ ಕಾರಣ ಈ ಇಬ್ಬರೂ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವ ಒತ್ತಡಲಿದ್ದಾರೆ.<br /> <br /> ರಿಷಿಕಾ ಸುಂಕರ, ನಿಧಿ ಚಿಲುಮುಲ, ಅಂಕಿತಾ ರೈನಾ ಅವರು ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಹಂತ ಪ್ರವೇಶಿಸಿದ್ದಾರೆ. ಇವರು ಭಾರತದ ಭರವಸೆ ಎನಿಸಿದ್ದಾರೆ. ಸ್ಫೂರ್ತಿ, ಶರ್ಮದಾ ಸೇರಿದಂತೆ ಒಟ್ಟು ನಾಲ್ಕು ಆಟಗಾರ್ತಿಯರು `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿದ್ದಾರೆ. <br /> <br /> ಪ್ರಧಾನ ಹಂತಕ್ಕೆ ರಿಷಿಕಾ: ಭಾರತದ ರಿಷಿಕಾ ಶಂಕರ ಪ್ರಧಾನ ಹಂತ ಪ್ರವೇಶಿಸುವಲ್ಲಿ ಯಶ ಕಂಡಿದ್ದಾರೆ. ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ರಿಷಿಕಾ 6-0, 6-2 ನೇರ ಸೆಟ್ಗಳಿಂದ ಸೆದಾ ಅರಂತೆಕಿನ್ ಎದುರು ಜಯ ಪಡೆದರು. ಎರಡೂ ಸೆಟ್ಗಳಲ್ಲಿ ರಿಷಿಕಾಗೆ ಪ್ರಬಲ ಸವಾಲು ಎದುರಾಗಲಿಲ್ಲ. <br /> ಅರ್ಹತಾ ಹಂತದಲ್ಲಿ ಯಶಸ್ಸು ಕಾಣಲು ಆತಿಥೇಯ ದೇಶದ ರುಷ್ಮಿ ಚಕ್ರವರ್ತಿಗೆ ಸಾಧ್ಯವಾಗಲಿಲ್ಲ. <br /> <br /> ಥಾಯ್ಲೆಂಡ್ನ ನುಂಗನಾದ್ ವಾನ್ಸುಕಾ 6-1, 6-1ರಲ್ಲಿ ರುಷ್ಮಿ ಅವರನ್ನು ಮಣಿಸಿದರು. <br /> ಅರ್ಹತಾ ಸುತ್ತಿನ ಫೈನಲ್ನಲ್ಲಿ ಭಾರತದ ನಿಧಿ 6-2, 2-6, 6-3ರಲ್ಲಿ ಇಟಲಿಯ ಮಾರ್ಟಿನಾ ಸಿಕ್ಕೊಟ್ಟಿ ಎದುರು ಜಯ ಪಡೆದು ಪ್ರಧಾನ ಹಂತ ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಈ ಆಟಗಾರ್ತಿ ಮಿಲನಿಯಾ ಕ್ಲಾಫಿನರ್ ಎದುರು ಆಡಲಿದ್ದಾರೆ.<br /> <br /> <strong>ಇಂದು ಉದ್ಘಾಟನೆ:</strong> ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ಗಂಟೆಗೆ ಟೂರ್ನಿಯ ಉದ್ಘಾಟನೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷಿನಾರಾಯಣ, ಕ್ಯೂನೆಟ್ನ ಸಿಇಒ ಸುರೇಶ್ ತಿಮಿರಿ ಮುಖ್ಯ ಅತಿಥಿಗಳಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸ್ಥಳೀಯ ಪ್ರತಿಭೆಗಳಾದ ಸ್ಫೂರ್ತಿ ಶಿವಲಿಂಗಯ್ಯ ಹಾಗೂ ಶರ್ಮದಾ ಬಾಲು ಸೋಮವಾರ ಆರಂಭವಾಗುವ ಕ್ಯೂನೆಟ್ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪ್ರಬಲ ಸವಾಲನ್ನು ಎದುರಿಸಲಿದ್ದಾರೆ.<br /> <br /> ನಗರದ ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಪಂದ್ಯಗಳು ನಡೆಯಲಿವೆ. 25,000 ಡಾಲರ್ ಬಹುಮಾನ ಹೊಂದಿರುವ ಈ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಫೂರ್ತಿ ಜರ್ಮನಿಯ ಮೈಕೆಲಾ ಫ್ರಾಲಿಕಾ ಜೊತೆ ಕಣಕ್ಕಿಳಿಲಿದ್ದಾರೆ. ಈ ಜೋಡಿ ಇಸ್ರೇಲ್ನ ಡೇನಿಜ್ ಕಜುನಿಕು ಮತ್ತು ಚೀನಾದ ಯಾ ಜಾವೊ ಸವಾಲನ್ನು ಎದುರಿಸಲಿದ್ದಾರೆ.<br /> <br /> ಬೆಂಗಳೂರಿನ ಇನ್ನೊಬ್ಬ ಆಟಗಾರ್ತಿ ಶರ್ಮದಾ ಡಬಲ್ಸ್ನಲ್ಲಿ ಸೆದಾ ಅರಂತೆಕಿನ್ ಜೊತೆ ಆಡಲಿದ್ದಾರೆ. ಇವರು ಕೊರಿಯಾದ ಸುಂಗ್ ಹೇಯ್ ಹನ್ ಹಾಗೂ ಇಸ್ರೇಲ್ನ ಕೇರನ್ ಶಲಾಮೊ ಎದುರು ಆಡಲಿದ್ದಾರೆ. <br /> <br /> ಭಾರತದ ಪ್ರೇರಣಾ ಭಾಂಬ್ರಿ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ತಮರ್ಯಾನ್ ಹೆಂಡ್ಲೆರ್ ಜೊತೆ ಸೆಣಸಲಿದ್ದಾರೆ. ತವರು ನೆಲದಲ್ಲಿಯೇ ಈ ಟೂರ್ನಿಯ ನಡೆಯಲಿರುವ ಕಾರಣ ಈ ಇಬ್ಬರೂ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವ ಒತ್ತಡಲಿದ್ದಾರೆ.<br /> <br /> ರಿಷಿಕಾ ಸುಂಕರ, ನಿಧಿ ಚಿಲುಮುಲ, ಅಂಕಿತಾ ರೈನಾ ಅವರು ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಹಂತ ಪ್ರವೇಶಿಸಿದ್ದಾರೆ. ಇವರು ಭಾರತದ ಭರವಸೆ ಎನಿಸಿದ್ದಾರೆ. ಸ್ಫೂರ್ತಿ, ಶರ್ಮದಾ ಸೇರಿದಂತೆ ಒಟ್ಟು ನಾಲ್ಕು ಆಟಗಾರ್ತಿಯರು `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿದ್ದಾರೆ. <br /> <br /> ಪ್ರಧಾನ ಹಂತಕ್ಕೆ ರಿಷಿಕಾ: ಭಾರತದ ರಿಷಿಕಾ ಶಂಕರ ಪ್ರಧಾನ ಹಂತ ಪ್ರವೇಶಿಸುವಲ್ಲಿ ಯಶ ಕಂಡಿದ್ದಾರೆ. ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ರಿಷಿಕಾ 6-0, 6-2 ನೇರ ಸೆಟ್ಗಳಿಂದ ಸೆದಾ ಅರಂತೆಕಿನ್ ಎದುರು ಜಯ ಪಡೆದರು. ಎರಡೂ ಸೆಟ್ಗಳಲ್ಲಿ ರಿಷಿಕಾಗೆ ಪ್ರಬಲ ಸವಾಲು ಎದುರಾಗಲಿಲ್ಲ. <br /> ಅರ್ಹತಾ ಹಂತದಲ್ಲಿ ಯಶಸ್ಸು ಕಾಣಲು ಆತಿಥೇಯ ದೇಶದ ರುಷ್ಮಿ ಚಕ್ರವರ್ತಿಗೆ ಸಾಧ್ಯವಾಗಲಿಲ್ಲ. <br /> <br /> ಥಾಯ್ಲೆಂಡ್ನ ನುಂಗನಾದ್ ವಾನ್ಸುಕಾ 6-1, 6-1ರಲ್ಲಿ ರುಷ್ಮಿ ಅವರನ್ನು ಮಣಿಸಿದರು. <br /> ಅರ್ಹತಾ ಸುತ್ತಿನ ಫೈನಲ್ನಲ್ಲಿ ಭಾರತದ ನಿಧಿ 6-2, 2-6, 6-3ರಲ್ಲಿ ಇಟಲಿಯ ಮಾರ್ಟಿನಾ ಸಿಕ್ಕೊಟ್ಟಿ ಎದುರು ಜಯ ಪಡೆದು ಪ್ರಧಾನ ಹಂತ ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಈ ಆಟಗಾರ್ತಿ ಮಿಲನಿಯಾ ಕ್ಲಾಫಿನರ್ ಎದುರು ಆಡಲಿದ್ದಾರೆ.<br /> <br /> <strong>ಇಂದು ಉದ್ಘಾಟನೆ:</strong> ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ಗಂಟೆಗೆ ಟೂರ್ನಿಯ ಉದ್ಘಾಟನೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷಿನಾರಾಯಣ, ಕ್ಯೂನೆಟ್ನ ಸಿಇಒ ಸುರೇಶ್ ತಿಮಿರಿ ಮುಖ್ಯ ಅತಿಥಿಗಳಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>