<p><strong>ಜಮಖಂಡಿ:</strong> ಕಾರವಾರದ ಕಾತ್ಯಾಯಿನಿ ಸ್ಪೋರ್ಟ್ಸ್ ಕ್ಲಬ್ ತಂಡ ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳ ಆಶ್ರಯದಲ್ಲಿ ಭಾನುವಾರ ಆರಂಭವಾದ ಅಂತರ ರಾಜ್ಯ ಕಬಡ್ಡಿ ಟೂರ್ನಿಯ ಮಹಿಳೆಯರ ವಿಭಾಗದ `ಎ~ ಗುಂಪಿನಲ್ಲಿ ತಾನಾಡಿದ ಎರಡೂ ಲೀಗ್ ಪಂದ್ಯಗಳನ್ನು ಗೆದ್ದು ನಾಕೌಟ್ ಹಂತದತ್ತ ಮುನ್ನಡೆಯಿತು.<br /> <br /> ಕಾತ್ಯಾಯಿನಿ ತಂಡ 19-12ರಿಂದ ಮುಂಬಯಿನ ಸಾವಿತ್ರಿಬಾಯಿ ತಂಡವನ್ನು ಮಣಿಸಿ ಟೂರ್ನಿಯ ಮೊದಲ ಜಯ ದಾಖಲಿಸಿದ ಸಾಧನೆ ಮಾಡಿತು. ನಂತರ ನಡೆದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಮಹಾರಾಣಿ ತಂಡವನ್ನು 32-25 ಅಂಕಗಳಿಂದ ಸುಲಭವಾಗಿ ಸೋಲಿಸಿತು.<br /> <br /> `ಡಿ~ ಗುಂಪಿನಲ್ಲಿ ಮುಂಬೈನ ದೇನಾ ಬ್ಯಾಂಕ್ ತಂಡ ಕೂಡ ಎರಡು ಲೀಗ್ ಪಂದ್ಯ ಜಯಿಸಿತು. `ಬಿ~ ಗುಂಪಿನಲ್ಲಿ ಕೊಲ್ಲಾಫುರದ ಮಹಾಲಕ್ಷ್ಮೀ, ಮೂಡಬಿದ್ರಿಯ ಆಳ್ವಾಸ್ ಹಾಗೂ `ಸಿ~ ಗುಂಪಿನಲ್ಲಿ ಸಾಂಗಲಿಯ ತರುಣ ಭಾರತ, `ಡಿ~ ಗುಂಪಿನಲ್ಲಿ ಪನ್ನಾಲದ ಸಂಸ್ಕೃತಿ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದವು. ಆದರೆ ಪನ್ನಾಲದ ಸಂಸ್ಕೃತಿ ತಂಡ ತನ್ನ ಎರಡನೇ ಪಂದ್ಯದಲ್ಲಿ ದೇನಾ ಬ್ಯಾಂಕ್ ವಿರುದ್ದ (20-21) ಏಕೈಕ ಪಾಯಿಂಟ್ನಿಂದ ಸೋಲು ಅನುಭವಿಸಿತು.ಕೊಲ್ಲಾಪುರದ ಮಹಾಲಕ್ಷ್ಮೀ ತಂಡ 29-9ರಿಂದ ಪುಣೆಯ ಎಸ್ಪಿಸಿ ವಿರುದ್ಧ ಜಯ ಪಡೆಯಿತು.</p>.<p> ಮೂಡಬಿದ್ರಿಯ ಆಳ್ವಾಸ್ ತಂಡ 24-10ರಿಂದ ಪುಣೆಯ ಎಸ್ಪಿಸಿ ಮೇಲೂ, ಸಾಂಗಲಿಯ ತರುಣ ಭಾರತ ತಂಡ 27-21ರಿಂದ ಬಾಚಣಿಯ ಜೈಹನುಮಾನ್ ತಂಡದ ವಿರುದ್ಧವೂ; ಪುತ್ತೂರಿನ ಸೇಂಟ್ ಫಿಲೋಮಿನಾ ತಂಡ 20-5ರಿಂದ ಸಾಂಗಲಿಯ ತರುಣ ಭಾರತ ತಂಡದ ಮೇಲೂ; ಪನ್ನಾಲದ ಸಂಸ್ಕೃತಿ ತಂಡ 34-13ರಿಂದ ಠಾಣೆ ತಂಡದ ವಿರುದ್ಧವೂ; ಮುಂಬೈಯ ದೇನಾ ಬ್ಯಾಂಕ್ ತಂಡ 19-8 ಅಂಕಗಳಿಂದ ಯಶವಂತಪುರ ತಂಡದ ಮೇಲೂ; ಯಶವಂತಪುರ ತಂಡ 21-20 ಅಂಕಗಳಿಂದ ಪನ್ನಾಲದ ಸಂಸ್ಕೃತಿ ತಂಡದ ವಿರುದ್ಧವೂ ಜಯ ದಾಖಲಿಸಿದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> ಕಾರವಾರದ ಕಾತ್ಯಾಯಿನಿ ಸ್ಪೋರ್ಟ್ಸ್ ಕ್ಲಬ್ ತಂಡ ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳ ಆಶ್ರಯದಲ್ಲಿ ಭಾನುವಾರ ಆರಂಭವಾದ ಅಂತರ ರಾಜ್ಯ ಕಬಡ್ಡಿ ಟೂರ್ನಿಯ ಮಹಿಳೆಯರ ವಿಭಾಗದ `ಎ~ ಗುಂಪಿನಲ್ಲಿ ತಾನಾಡಿದ ಎರಡೂ ಲೀಗ್ ಪಂದ್ಯಗಳನ್ನು ಗೆದ್ದು ನಾಕೌಟ್ ಹಂತದತ್ತ ಮುನ್ನಡೆಯಿತು.<br /> <br /> ಕಾತ್ಯಾಯಿನಿ ತಂಡ 19-12ರಿಂದ ಮುಂಬಯಿನ ಸಾವಿತ್ರಿಬಾಯಿ ತಂಡವನ್ನು ಮಣಿಸಿ ಟೂರ್ನಿಯ ಮೊದಲ ಜಯ ದಾಖಲಿಸಿದ ಸಾಧನೆ ಮಾಡಿತು. ನಂತರ ನಡೆದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಮಹಾರಾಣಿ ತಂಡವನ್ನು 32-25 ಅಂಕಗಳಿಂದ ಸುಲಭವಾಗಿ ಸೋಲಿಸಿತು.<br /> <br /> `ಡಿ~ ಗುಂಪಿನಲ್ಲಿ ಮುಂಬೈನ ದೇನಾ ಬ್ಯಾಂಕ್ ತಂಡ ಕೂಡ ಎರಡು ಲೀಗ್ ಪಂದ್ಯ ಜಯಿಸಿತು. `ಬಿ~ ಗುಂಪಿನಲ್ಲಿ ಕೊಲ್ಲಾಫುರದ ಮಹಾಲಕ್ಷ್ಮೀ, ಮೂಡಬಿದ್ರಿಯ ಆಳ್ವಾಸ್ ಹಾಗೂ `ಸಿ~ ಗುಂಪಿನಲ್ಲಿ ಸಾಂಗಲಿಯ ತರುಣ ಭಾರತ, `ಡಿ~ ಗುಂಪಿನಲ್ಲಿ ಪನ್ನಾಲದ ಸಂಸ್ಕೃತಿ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದವು. ಆದರೆ ಪನ್ನಾಲದ ಸಂಸ್ಕೃತಿ ತಂಡ ತನ್ನ ಎರಡನೇ ಪಂದ್ಯದಲ್ಲಿ ದೇನಾ ಬ್ಯಾಂಕ್ ವಿರುದ್ದ (20-21) ಏಕೈಕ ಪಾಯಿಂಟ್ನಿಂದ ಸೋಲು ಅನುಭವಿಸಿತು.ಕೊಲ್ಲಾಪುರದ ಮಹಾಲಕ್ಷ್ಮೀ ತಂಡ 29-9ರಿಂದ ಪುಣೆಯ ಎಸ್ಪಿಸಿ ವಿರುದ್ಧ ಜಯ ಪಡೆಯಿತು.</p>.<p> ಮೂಡಬಿದ್ರಿಯ ಆಳ್ವಾಸ್ ತಂಡ 24-10ರಿಂದ ಪುಣೆಯ ಎಸ್ಪಿಸಿ ಮೇಲೂ, ಸಾಂಗಲಿಯ ತರುಣ ಭಾರತ ತಂಡ 27-21ರಿಂದ ಬಾಚಣಿಯ ಜೈಹನುಮಾನ್ ತಂಡದ ವಿರುದ್ಧವೂ; ಪುತ್ತೂರಿನ ಸೇಂಟ್ ಫಿಲೋಮಿನಾ ತಂಡ 20-5ರಿಂದ ಸಾಂಗಲಿಯ ತರುಣ ಭಾರತ ತಂಡದ ಮೇಲೂ; ಪನ್ನಾಲದ ಸಂಸ್ಕೃತಿ ತಂಡ 34-13ರಿಂದ ಠಾಣೆ ತಂಡದ ವಿರುದ್ಧವೂ; ಮುಂಬೈಯ ದೇನಾ ಬ್ಯಾಂಕ್ ತಂಡ 19-8 ಅಂಕಗಳಿಂದ ಯಶವಂತಪುರ ತಂಡದ ಮೇಲೂ; ಯಶವಂತಪುರ ತಂಡ 21-20 ಅಂಕಗಳಿಂದ ಪನ್ನಾಲದ ಸಂಸ್ಕೃತಿ ತಂಡದ ವಿರುದ್ಧವೂ ಜಯ ದಾಖಲಿಸಿದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>