<p><strong>ಬೆಂಗಳೂರು:</strong> ಕೀನ್ಯಾ ತಂಡದ ಆಟಗಾರರು ಭಾರತೀಯರಿಗೆ ಕೃತಜ್ಞರು. ಇಂಥದೊಂದು ಭಾವನೆ ಮೂಡಲು ಕಾರಣವೂ ಇದೆ. ವಿಶ್ವಕಪ್ ಕ್ರಿಕೆಟ್ ಆತಿಥ್ಯದ ಹೊಣೆ ಹೊತ್ತಿರುವ ದೇಶಗಳಲ್ಲಿ ಒಂದಾದ ಭಾರತದ ಕಂಪೆನಿಯೊಂದು ಕೀನ್ಯಾ ಕ್ರಿಕೆಟ್ ಪಡೆಗೆ ಆರ್ಥಿಕವಾಗಿ ಬೆಂಬಲ ನೀಡಿದೆ.<br /> <br /> ವಿಶ್ವಕಪ್ನಲ್ಲಿ ಪಾಲ್ಗೊಂಡಿರುವ ಜಿಮ್ಮಿ ಕಮಾಂಡೆ ನೇತೃತ್ವದ ಪಡೆಗೆ ಪ್ರಾಯೋಜಕತ್ವ ನೀಡಿರುವುದು ಭಾರತೀಯ ಮೂಲದ ಕರುತುರಿ ಗ್ಲೋಬಲ್ ಲಿಮಿಟೆಡ್. ಆದ್ದರಿಂದ ಭಾರತಕ್ಕೆ ಈ ತಂಡವು ಆಭಾರಿಯಾಗಿದೆ. ಕೆಳಮಟ್ಟದ ಕ್ರಿಕೆಟ್ನಿಂದ ಹಿಡಿದು ಕೀನ್ಯಾದ ಸೀನಿಯರ್ ತಂಡದವರಿಗೆ ಕರ್ನಾಟಕದ ಈ ಕಂಪೆನಿಯ ಪ್ರೋತ್ಸಾಹವಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಲು ಉದ್ಯಾನನಗರಿಗೆ ಬಂದಿದ್ದ ಕಮಾಂಡೆ ಬಳಗದ ಕ್ರಿಕೆಟಿಗರಿಗೆ ಕರುತುರಿ ವಿಶೇಷವಾಗಿ ವರ್ಣರಂಜಿತ ಸಮಾರಂಭವನ್ನು ಆಯೋಜಿಸಿ ಅಭಿನಂದಿಸಿತು.<br /> <br /> ಕೀನ್ಯಾ ತಂಡದ ನಾಯಕ ಕಮಾಂಡೆ ಮಾತನಾಡಿ, ‘ಇದೊಂದು ವಿಶಿಷ್ಟವಾದ ಕ್ಷಣ. ನಮ್ಮ ದೇಶದಿಂದ ಹೊರಗೆ ಇದ್ದಾಗ ಇಷೆಂದು ದೊಡ್ಡ ಅಭಿನಂದನಾ ಸಮಾರಂಭವನ್ನು ಆಯೋಜಿಸಿ ಗೌರವ ನೀಡಲಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೀನ್ಯಾ ತಂಡದ ಆಟಗಾರರು ಭಾರತೀಯರಿಗೆ ಕೃತಜ್ಞರು. ಇಂಥದೊಂದು ಭಾವನೆ ಮೂಡಲು ಕಾರಣವೂ ಇದೆ. ವಿಶ್ವಕಪ್ ಕ್ರಿಕೆಟ್ ಆತಿಥ್ಯದ ಹೊಣೆ ಹೊತ್ತಿರುವ ದೇಶಗಳಲ್ಲಿ ಒಂದಾದ ಭಾರತದ ಕಂಪೆನಿಯೊಂದು ಕೀನ್ಯಾ ಕ್ರಿಕೆಟ್ ಪಡೆಗೆ ಆರ್ಥಿಕವಾಗಿ ಬೆಂಬಲ ನೀಡಿದೆ.<br /> <br /> ವಿಶ್ವಕಪ್ನಲ್ಲಿ ಪಾಲ್ಗೊಂಡಿರುವ ಜಿಮ್ಮಿ ಕಮಾಂಡೆ ನೇತೃತ್ವದ ಪಡೆಗೆ ಪ್ರಾಯೋಜಕತ್ವ ನೀಡಿರುವುದು ಭಾರತೀಯ ಮೂಲದ ಕರುತುರಿ ಗ್ಲೋಬಲ್ ಲಿಮಿಟೆಡ್. ಆದ್ದರಿಂದ ಭಾರತಕ್ಕೆ ಈ ತಂಡವು ಆಭಾರಿಯಾಗಿದೆ. ಕೆಳಮಟ್ಟದ ಕ್ರಿಕೆಟ್ನಿಂದ ಹಿಡಿದು ಕೀನ್ಯಾದ ಸೀನಿಯರ್ ತಂಡದವರಿಗೆ ಕರ್ನಾಟಕದ ಈ ಕಂಪೆನಿಯ ಪ್ರೋತ್ಸಾಹವಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಲು ಉದ್ಯಾನನಗರಿಗೆ ಬಂದಿದ್ದ ಕಮಾಂಡೆ ಬಳಗದ ಕ್ರಿಕೆಟಿಗರಿಗೆ ಕರುತುರಿ ವಿಶೇಷವಾಗಿ ವರ್ಣರಂಜಿತ ಸಮಾರಂಭವನ್ನು ಆಯೋಜಿಸಿ ಅಭಿನಂದಿಸಿತು.<br /> <br /> ಕೀನ್ಯಾ ತಂಡದ ನಾಯಕ ಕಮಾಂಡೆ ಮಾತನಾಡಿ, ‘ಇದೊಂದು ವಿಶಿಷ್ಟವಾದ ಕ್ಷಣ. ನಮ್ಮ ದೇಶದಿಂದ ಹೊರಗೆ ಇದ್ದಾಗ ಇಷೆಂದು ದೊಡ್ಡ ಅಭಿನಂದನಾ ಸಮಾರಂಭವನ್ನು ಆಯೋಜಿಸಿ ಗೌರವ ನೀಡಲಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>