<p><strong>ಸೋನೆಪತ್ (ಪಿಟಿಐ): </strong>ಬೀಜಿಂಗ್ ಒಲಿಂಪಿಕ್ನಲ್ಲಿ ಸಾಧ್ಯವಾಗದ್ದನ್ನು ಲಂಡನ್ನಲ್ಲಿ ಸಾಧಿಸಿ ತೋರಿಸಬೇಕು. ಇಂಥದೊಂದು ಮಹದಾಸೆ ಹೊಂದಿದ್ದಾರೆ ಕುಸ್ತಿಪಟು ಯೋಗೇಶ್ವರ ದತ್ತ.</p>.<p>ಇದು ತಮ್ಮ ಕೊನೆಯ ಒಲಿಂಪಿಕ್ ಎಂದು ನಿರ್ಧರಿಸಿರುವ ಅವರು ಕ್ರೀಡಾ ಜೀವನ ಕೊನೆಗೊಳಿಸುವ ಮುನ್ನ ಸ್ವರ್ಣ ಸಂಭ್ರಮದ ಅಲೆಯಲ್ಲಿ ತೇಲುವ ಕನಸು ಕಂಡಿದ್ದಾರೆ. ಬೀಜಿಂಗ್ನಲ್ಲಿ ಕಾಡಿದ್ದ ನಿರಾಸೆ ಮತ್ತೊಮ್ಮೆ ಬೆನ್ನತ್ತಲು ಬಿಡುವುದಿಲ್ಲ ಎನ್ನುವ ಛಲದಿಂದ ಲಂಡನ್ ಕಡೆಗೆ ಮುಖಮಾಡಿದ್ದಾರೆ.</p>.<p>ಯೋಗೇಶ್ವರ್ ಮಟ್ಟಿಗೆ ಇದು ಮೂರನೇ ಒಲಿಂಪಿಕ್. 2008ರಲ್ಲಿ ಪದಕದ ಆಸೆ ಈಡೇರುತ್ತದೆ ಎಂದು ನಿರೀಕ್ಷೆ ಮಾಡಿದ್ದರು ದತ್ತ. ಆದರೆ ಕಂಚು ಕೂಡ ದಕ್ಕಲಿಲ್ಲ. ಬೀಜಿಂಗ್ನಲ್ಲಿ ಮೂರನೇ ಸ್ಥಾನಕ್ಕಾಗಿ ಪಟ್ಟು ಹಾಕಿದ್ದರು. ಆದರೆ ಕೊನೆಯ ಹತ್ತು ಸೆಕೆಂಡುಗಳಲ್ಲಿ ಎಲ್ಲವೂ ವ್ಯತ್ಯಾಸವಾಯಿತು. ಆ ಕಹಿ ನೆನಪಿನ್ನೂ ಅವರನ್ನು ಕಾಡುತ್ತಿದೆ.</p>.<p>`ಒಲಿಂಪಿಕ್ ವರ್ಷ ವರ್ಷವೂ ನಡೆಯುವ ಕೂಟವಲ್ಲ. ನಾಲ್ಕು ವರ್ಷಗಳಿಗೊಮ್ಮೆ ತೆರೆಯುವ ಅದೃಷ್ಟದ ಬಾಗಿಲು. ಮೂರನೇ ಬಾರಿಗೆ ನನಗೆ ಈ ಮಹಾ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಮುಂದಿನ ಒಲಿಂಪಿಕ್ ಕೂಟದಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುವ ನಿರೀಕ್ಷೆ ಖಂಡಿತ ಇಲ್ಲ. ಆದ್ದರಿಂದ ಇದು ನನ್ನ ಮಟ್ಟಿಗೆ ಕೊನೆಯ ಒಲಿಂಪಿಕ್ಸ್. ಪದಕ ಗೆಲ್ಲಲು ಸಿಕ್ಕಿರುವ ಅಂತಿಮ ಅವಕಾಶವೂ ಹೌದು~ ಎಂದು ಯೋಗೇಶ್ವರ್ ಹೇಳಿದ್ದಾರೆ.</p>.<p>ಎಸ್ಎಐ ಕೇಂದ್ರದಲ್ಲಿ ದೀರ್ಘ ಕಾಲ ತರಬೇತಿ ನಡೆಸಿರುವ ಅವರು `ಈ ಬಾರಿ ದೇಶಕ್ಕೆ ದೊಡ್ಡ ಕೊಡುಗೆ ನೀಡಲು ಬಯಸಿದ್ದೇನೆ. ನಾನು ಪಾಲ್ಗೊಳ್ಳುವ ವಿಭಾಗದಲ್ಲಿ ಸ್ವರ್ಣ ಪದಕವೇ ನನ್ನ ಗುರಿಯಾಗಿದೆ. ಕಳೆದ ಸಾರಿ ದೇಶಕ್ಕೆ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಪದಕವನ್ನು ಗೆದ್ದು ತಂದಿದ್ದರು. ಅದಕ್ಕಿಂತ ಉನ್ನತವಾದ ಸಾಧನೆ ನನ್ನದಾಗಬೇಕು. ಅದೇ ನನ್ನ ಉದ್ದೇಶ~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p>.<p>29 ವರ್ಷ ವಯಸ್ಸಿನ ದತ್ತ ಅವರು ಒಲಿಂಪಿಕ್ ಸಿದ್ಧತೆಯ ಅಂಗವಾಗಿ ಅಮೆರಿಕಾದಲ್ಲಿ ಕೂಡ ತರಬೇತಿ ಪಡೆದಿದ್ದಾರೆ. ಅಲ್ಲಿನ ಉತ್ತಮ ತಂತ್ರಗಳನ್ನು ಕಲಿಯಲು ಸಾಧ್ಯವಾಯಿತು ಎಂದಿರುವ ಅವರು `ಕೊಲೊರಾಡೊ ಸ್ಪ್ರಿಂಗ್ಸ್ನಲ್ಲಿ ತರಬೇತಿ ಪಡೆದಿದ್ದು ಹೆಚ್ಚು ಪ್ರಯೋಜನಕಾರಿ. ಒಲಿಂಪಿಕ್ ಸಂದರ್ಭದಲ್ಲಿ ಲಂಡನ್ನಲ್ಲಿ ಇರುವಂಥ ವಾತಾವರಣ ಅಲ್ಲಿನದ್ದು. ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಪೂರ್ವ ತಯಾರಿ ಮಾಡಿಕೊಂಡಂತಾಗಿದೆ~ ಎಂದು ನುಡಿದರು.</p>.<p>`ತರಬೇತಿ ಕಾಲದಲ್ಲಿ ಮುಖ್ಯವಾಗಿ ಕಾಲಿನ ಚಲನೆ ಮೇಲೆ ನಿಯಂತ್ರಣ ಸಾಧಿಸಲು ಗಮನ ನೀಡಲಾಯಿತು. ಜೊತೆಗೆ ಎದುರಾಳಿಯನ್ನು ನೆಲಕ್ಕೆ ಉರುಳಿಸುವ ವಿವಿಧ ಸಾಧ್ಯತೆಗಳ ಬಗ್ಗೆಯೂ ಅಲ್ಲಿ ಸೂಕ್ತ ಮಾರ್ಗದರ್ಶನ ಸಿಕ್ಕಿತು~ ಎಂದು ವಿವರಿಸಿದರು.</p>.<p>ಒಲಿಂಪಿಕ್ಗೆ ಮುನ್ನ ಬೆಲಾರಸ್ನಲ್ಲಿ ಕೆಲವು ದಿನ ಅಭ್ಯಾಸ ನಡೆಸುವುದಾಗಿ ತಿಳಿಸಿದ ಅವರು `ಇಂಗ್ಲೆಂಡ್ ಹಾಗೂ ಬೆಲಾರಸ್ ಒಂದೇ ಕಾಲಮಾನ ಹೊಂದಿವೆ. ಆದ್ದರಿಂದ ನಿದ್ದೆ ಹಾಗೂ ಅಭ್ಯಾಸದ ಅವಧಿಯನ್ನು ಹೊಂದಿಸಿಕೊಳ್ಳಲು ಈ ಅಲ್ಪಾವಧಿಯ ಅಭ್ಯಾಸ ಸಹಕಾರಿ ಆಗಲಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋನೆಪತ್ (ಪಿಟಿಐ): </strong>ಬೀಜಿಂಗ್ ಒಲಿಂಪಿಕ್ನಲ್ಲಿ ಸಾಧ್ಯವಾಗದ್ದನ್ನು ಲಂಡನ್ನಲ್ಲಿ ಸಾಧಿಸಿ ತೋರಿಸಬೇಕು. ಇಂಥದೊಂದು ಮಹದಾಸೆ ಹೊಂದಿದ್ದಾರೆ ಕುಸ್ತಿಪಟು ಯೋಗೇಶ್ವರ ದತ್ತ.</p>.<p>ಇದು ತಮ್ಮ ಕೊನೆಯ ಒಲಿಂಪಿಕ್ ಎಂದು ನಿರ್ಧರಿಸಿರುವ ಅವರು ಕ್ರೀಡಾ ಜೀವನ ಕೊನೆಗೊಳಿಸುವ ಮುನ್ನ ಸ್ವರ್ಣ ಸಂಭ್ರಮದ ಅಲೆಯಲ್ಲಿ ತೇಲುವ ಕನಸು ಕಂಡಿದ್ದಾರೆ. ಬೀಜಿಂಗ್ನಲ್ಲಿ ಕಾಡಿದ್ದ ನಿರಾಸೆ ಮತ್ತೊಮ್ಮೆ ಬೆನ್ನತ್ತಲು ಬಿಡುವುದಿಲ್ಲ ಎನ್ನುವ ಛಲದಿಂದ ಲಂಡನ್ ಕಡೆಗೆ ಮುಖಮಾಡಿದ್ದಾರೆ.</p>.<p>ಯೋಗೇಶ್ವರ್ ಮಟ್ಟಿಗೆ ಇದು ಮೂರನೇ ಒಲಿಂಪಿಕ್. 2008ರಲ್ಲಿ ಪದಕದ ಆಸೆ ಈಡೇರುತ್ತದೆ ಎಂದು ನಿರೀಕ್ಷೆ ಮಾಡಿದ್ದರು ದತ್ತ. ಆದರೆ ಕಂಚು ಕೂಡ ದಕ್ಕಲಿಲ್ಲ. ಬೀಜಿಂಗ್ನಲ್ಲಿ ಮೂರನೇ ಸ್ಥಾನಕ್ಕಾಗಿ ಪಟ್ಟು ಹಾಕಿದ್ದರು. ಆದರೆ ಕೊನೆಯ ಹತ್ತು ಸೆಕೆಂಡುಗಳಲ್ಲಿ ಎಲ್ಲವೂ ವ್ಯತ್ಯಾಸವಾಯಿತು. ಆ ಕಹಿ ನೆನಪಿನ್ನೂ ಅವರನ್ನು ಕಾಡುತ್ತಿದೆ.</p>.<p>`ಒಲಿಂಪಿಕ್ ವರ್ಷ ವರ್ಷವೂ ನಡೆಯುವ ಕೂಟವಲ್ಲ. ನಾಲ್ಕು ವರ್ಷಗಳಿಗೊಮ್ಮೆ ತೆರೆಯುವ ಅದೃಷ್ಟದ ಬಾಗಿಲು. ಮೂರನೇ ಬಾರಿಗೆ ನನಗೆ ಈ ಮಹಾ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಮುಂದಿನ ಒಲಿಂಪಿಕ್ ಕೂಟದಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುವ ನಿರೀಕ್ಷೆ ಖಂಡಿತ ಇಲ್ಲ. ಆದ್ದರಿಂದ ಇದು ನನ್ನ ಮಟ್ಟಿಗೆ ಕೊನೆಯ ಒಲಿಂಪಿಕ್ಸ್. ಪದಕ ಗೆಲ್ಲಲು ಸಿಕ್ಕಿರುವ ಅಂತಿಮ ಅವಕಾಶವೂ ಹೌದು~ ಎಂದು ಯೋಗೇಶ್ವರ್ ಹೇಳಿದ್ದಾರೆ.</p>.<p>ಎಸ್ಎಐ ಕೇಂದ್ರದಲ್ಲಿ ದೀರ್ಘ ಕಾಲ ತರಬೇತಿ ನಡೆಸಿರುವ ಅವರು `ಈ ಬಾರಿ ದೇಶಕ್ಕೆ ದೊಡ್ಡ ಕೊಡುಗೆ ನೀಡಲು ಬಯಸಿದ್ದೇನೆ. ನಾನು ಪಾಲ್ಗೊಳ್ಳುವ ವಿಭಾಗದಲ್ಲಿ ಸ್ವರ್ಣ ಪದಕವೇ ನನ್ನ ಗುರಿಯಾಗಿದೆ. ಕಳೆದ ಸಾರಿ ದೇಶಕ್ಕೆ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಪದಕವನ್ನು ಗೆದ್ದು ತಂದಿದ್ದರು. ಅದಕ್ಕಿಂತ ಉನ್ನತವಾದ ಸಾಧನೆ ನನ್ನದಾಗಬೇಕು. ಅದೇ ನನ್ನ ಉದ್ದೇಶ~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p>.<p>29 ವರ್ಷ ವಯಸ್ಸಿನ ದತ್ತ ಅವರು ಒಲಿಂಪಿಕ್ ಸಿದ್ಧತೆಯ ಅಂಗವಾಗಿ ಅಮೆರಿಕಾದಲ್ಲಿ ಕೂಡ ತರಬೇತಿ ಪಡೆದಿದ್ದಾರೆ. ಅಲ್ಲಿನ ಉತ್ತಮ ತಂತ್ರಗಳನ್ನು ಕಲಿಯಲು ಸಾಧ್ಯವಾಯಿತು ಎಂದಿರುವ ಅವರು `ಕೊಲೊರಾಡೊ ಸ್ಪ್ರಿಂಗ್ಸ್ನಲ್ಲಿ ತರಬೇತಿ ಪಡೆದಿದ್ದು ಹೆಚ್ಚು ಪ್ರಯೋಜನಕಾರಿ. ಒಲಿಂಪಿಕ್ ಸಂದರ್ಭದಲ್ಲಿ ಲಂಡನ್ನಲ್ಲಿ ಇರುವಂಥ ವಾತಾವರಣ ಅಲ್ಲಿನದ್ದು. ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಪೂರ್ವ ತಯಾರಿ ಮಾಡಿಕೊಂಡಂತಾಗಿದೆ~ ಎಂದು ನುಡಿದರು.</p>.<p>`ತರಬೇತಿ ಕಾಲದಲ್ಲಿ ಮುಖ್ಯವಾಗಿ ಕಾಲಿನ ಚಲನೆ ಮೇಲೆ ನಿಯಂತ್ರಣ ಸಾಧಿಸಲು ಗಮನ ನೀಡಲಾಯಿತು. ಜೊತೆಗೆ ಎದುರಾಳಿಯನ್ನು ನೆಲಕ್ಕೆ ಉರುಳಿಸುವ ವಿವಿಧ ಸಾಧ್ಯತೆಗಳ ಬಗ್ಗೆಯೂ ಅಲ್ಲಿ ಸೂಕ್ತ ಮಾರ್ಗದರ್ಶನ ಸಿಕ್ಕಿತು~ ಎಂದು ವಿವರಿಸಿದರು.</p>.<p>ಒಲಿಂಪಿಕ್ಗೆ ಮುನ್ನ ಬೆಲಾರಸ್ನಲ್ಲಿ ಕೆಲವು ದಿನ ಅಭ್ಯಾಸ ನಡೆಸುವುದಾಗಿ ತಿಳಿಸಿದ ಅವರು `ಇಂಗ್ಲೆಂಡ್ ಹಾಗೂ ಬೆಲಾರಸ್ ಒಂದೇ ಕಾಲಮಾನ ಹೊಂದಿವೆ. ಆದ್ದರಿಂದ ನಿದ್ದೆ ಹಾಗೂ ಅಭ್ಯಾಸದ ಅವಧಿಯನ್ನು ಹೊಂದಿಸಿಕೊಳ್ಳಲು ಈ ಅಲ್ಪಾವಧಿಯ ಅಭ್ಯಾಸ ಸಹಕಾರಿ ಆಗಲಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>