<p><strong>ಮೈಸೂರು: </strong>ಗ್ಲೇಡ್ಸ್ ಮಾದರಿಯಲ್ಲಿ ಮಹಾರಾಜ ಕಾಲೇಜಿನ ಐತಿಹಾಸಿಕ ಕ್ರಿಕೆಟ್ ಮೈದಾನವನ್ನು ಅಭಿವೃದ್ಧಿಪಡಿ ಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡಿವೆ.<br /> <br /> ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಮೈಸೂರು ವಿ.ವಿ ಕುಲಸಚಿವ ಪ್ರೊ.ಸಿ. ಬಸವರಾಜು ಒಡಂಬಡಿಕೆಗೆ ಸಹಿ ಹಾಕಿದರು.<br /> <br /> 23 ವರ್ಷಗಳ ಅವಧಿಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೈದಾನ ಅಭಿವೃದ್ಧಿ ಹಾಗೂ ಸಂಪೂರ್ಣ ನಿರ್ವಹಣೆ ಹೊಣೆಯನ್ನು ಕ್ರಿಕೆಟ್ ಸಂಸ್ಥೆ ಹೊತ್ತಿದೆ. 10ಟರ್ಫ್ ಪಿಚ್ಗಳ ನಿರ್ಮಾಣ (ಪಂದ್ಯಗಳಿಗೆ 5, ಅಭ್ಯಾಸಕ್ಕೆ 5 ಪಿಚ್), ಪೆವಿಲಿಯನ್, ಕಚೇರಿ, ಕಾಂಪೌಂಡ್ ಹಾಗೂ ಅಂಗಳದಲ್ಲಿ ಹುಲ್ಲುಹಾಸು ನಿರ್ಮಾಣ ಮಾಡುವುದಾಗಿ ಒಡಂಬಡಿಕೆ ಪತ್ರದಲ್ಲಿ ಕೆಎಸ್ಸಿಎ ಹೇಳಿದೆ. ಜೊತೆಗೆ, ವಿಶ್ವವಿದ್ಯಾಲಯದ ಕ್ರಿಕೆಟ್ ಚಟುವಟಿಕೆ ಗಳಿಗೂ ಅವಕಾಶ ಮಾಡಿಕೊಡಲಿದೆ.<br /> <br /> ಕ್ರಿಕೆಟ್ ಸಂಸ್ಥೆಯು ಮೈಸೂರಿನಲ್ಲಿ ಈಗಾಗಲೇ ಗ್ಲೇಡ್ಸ್ ಕ್ರೀಡಾಂಗಣ ಹಾಗೂ ಜಯಚಾಮರಾಜೇಂದ್ರ ಎಂಜಿನಿಯ ರಿಂಗ್ ಕಾಲೇಜಿನ ಕ್ರೀಡಾಂಗಣದ ಉಸ್ತುವಾರಿ ವಹಿಸಿಕೊಡು ಅಭಿವೃದ್ಧಿಪಡಿಸಿದೆ. ಈಗ ಒಡಂಬಡಿಕೆ ಮಾಡಿಕೊಂಡಿರುವುದು ಮೂರನೇ ಮೈದಾನ. <br /> <br /> ಒಡಂಬಡಿಕೆ ಬಳಿಕ ಮಾತನಾಡಿದ ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ‘ಕ್ರಿಕೆಟ್ ಸಂಸ್ಥೆಯವರು ಈಗಾಗಲೇ ಗ್ಲೇಡ್ಸ್ ಕ್ರೀಡಾಂಗಣವನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಅಂಗಳದಲ್ಲಿ ಆಯೋಜಿಸಿದ ಕೆಪಿಎಲ್ ಪಂದ್ಯಗಳನ್ನು ವೀಕ್ಷಿಸಿ ಖುಷಿಪಟ್ಟವರಲ್ಲಿ ನಾನು ಕೂಡ ಒಬ್ಬ. ಕೆಎಸ್ಸಿಎ ಜೊತೆಗೂಡಿ ಕೆಲಸ ಮಾಡಲು ವಿ.ವಿ ಸಿದ್ಧವಾಗಿದೆ’ ಎಂದರು.<br /> <br /> ಕೆಎಸ್ಸಿಎ ಅಧ್ಯಕ್ಷ ಆರ್. ಅಶೋಕಾನಂದ ಅವರು, ‘ಮಹಾರಾಜ ಕಾಲೇಜಿನ ಈ ಮೈದಾನದಲ್ಲಿ ಆಡಿದ ಅನುಭವ ನನಗಿದೆ. ಶಫಿ ದಾರಾಶಾ, ಪಾರ್ಥಸಾರಥಿ, ಜಾವಗಲ್ ಶ್ರೀನಾಥ್ ಈ ಮೈದಾನದಲ್ಲಿ ಒಡಮೂಡಿದ ಪ್ರತಿಭೆಗಳು. ಈ ಮೈದಾನವನ್ನು ಗ್ಲೇಡ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸ ಲಾಗುವುದು’ ಎಂದು ಭರವಸೆ ನೀಡಿದರು.<br /> <br /> <strong>ಪ್ರಥಮದರ್ಜೆ ಪಂದ್ಯ ಆಯೋಜನೆ: </strong>‘ಬೆಂಗಳೂರು ಹೊರತುಪಡಿಸಿದರೆ ಹೆಚ್ಚು ಕ್ರಿಕೆಟ್ ಚಟುವಟಿಕೆಗಳು ನಡೆ ಯುವ ತಾಣ ಮೈಸೂರು. ಪ್ರಥಮದರ್ಜೆ ಪಂದ್ಯ ಆಡಲು ಸಾಧ್ಯವಾಗುವಂತೆ ಈ ಮೈದಾನ ಅಭಿವೃದ್ಧಿಪಡಿಸಲಿದ್ದೇವೆ. ಗ್ಲೇಡ್ಸ್ಗೆ ಹೋಲಿಸಿದರೆ ಈ ಮೈದಾನ ಚಿಕ್ಕದು. ಆದರೆ, ಸುಂದರ ಕ್ರೀಡಾಂಗಣ ವನ್ನಾಗಿ ನಿರ್ಮಿಸಲು ಪ್ರಯತ್ನಿಸುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ’ ಎಂದು ಬ್ರಿಜೇಶ್ ತಿಳಿಸಿದರು.<br /> </p>.<p><strong>150 ವರ್ಷಗಳ ಇತಿಹಾಸ...</strong><br /> ಮಹಾರಾಜ ಕಾಲೇಜಿನ ಕ್ರಿಕೆಟ್ ಮೈದಾನಕ್ಕೆ 150 ವರ್ಷಗಳ ಇತಿಹಾಸವಿದೆ. ಇದನ್ನು ಆಗ ಅಭಿವೃದ್ಧಿಪಡಿಸಿದ್ದು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಜೆ.ಸಿ. ರೋಲೊ.</p>.<p>ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣಕ್ಕೆ ಮುನ್ನ ಇಲ್ಲಿ ರಣಜಿ ಪಂದ್ಯಗಳು ನಡೆಯುತ್ತಿದ್ದವು. ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಇಲ್ಲಿನ ಮ್ಯಾಟ್ ಪಿಚ್ನಲ್ಲಿ ರಣಜಿ ಪಂದ್ಯ ಆಯೋಜಿಸಲಾಗಿತ್ತು. ಜಾವಗಲ್ ಶ್ರೀನಾಥ್ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರು ಈ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ.</p>.<p>ಈ ಮೈದಾನವು ಇದುವರೆಗೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಸ್ತುವಾರಿಯಲ್ಲಿತ್ತು. ಇದನ್ನು ಸ್ಪೋರ್ಟ್ಸ್ ಪೆವಿಲಿಯನ್ ಎಂದೂ ಕರೆಯಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಗ್ಲೇಡ್ಸ್ ಮಾದರಿಯಲ್ಲಿ ಮಹಾರಾಜ ಕಾಲೇಜಿನ ಐತಿಹಾಸಿಕ ಕ್ರಿಕೆಟ್ ಮೈದಾನವನ್ನು ಅಭಿವೃದ್ಧಿಪಡಿ ಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡಿವೆ.<br /> <br /> ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಮೈಸೂರು ವಿ.ವಿ ಕುಲಸಚಿವ ಪ್ರೊ.ಸಿ. ಬಸವರಾಜು ಒಡಂಬಡಿಕೆಗೆ ಸಹಿ ಹಾಕಿದರು.<br /> <br /> 23 ವರ್ಷಗಳ ಅವಧಿಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೈದಾನ ಅಭಿವೃದ್ಧಿ ಹಾಗೂ ಸಂಪೂರ್ಣ ನಿರ್ವಹಣೆ ಹೊಣೆಯನ್ನು ಕ್ರಿಕೆಟ್ ಸಂಸ್ಥೆ ಹೊತ್ತಿದೆ. 10ಟರ್ಫ್ ಪಿಚ್ಗಳ ನಿರ್ಮಾಣ (ಪಂದ್ಯಗಳಿಗೆ 5, ಅಭ್ಯಾಸಕ್ಕೆ 5 ಪಿಚ್), ಪೆವಿಲಿಯನ್, ಕಚೇರಿ, ಕಾಂಪೌಂಡ್ ಹಾಗೂ ಅಂಗಳದಲ್ಲಿ ಹುಲ್ಲುಹಾಸು ನಿರ್ಮಾಣ ಮಾಡುವುದಾಗಿ ಒಡಂಬಡಿಕೆ ಪತ್ರದಲ್ಲಿ ಕೆಎಸ್ಸಿಎ ಹೇಳಿದೆ. ಜೊತೆಗೆ, ವಿಶ್ವವಿದ್ಯಾಲಯದ ಕ್ರಿಕೆಟ್ ಚಟುವಟಿಕೆ ಗಳಿಗೂ ಅವಕಾಶ ಮಾಡಿಕೊಡಲಿದೆ.<br /> <br /> ಕ್ರಿಕೆಟ್ ಸಂಸ್ಥೆಯು ಮೈಸೂರಿನಲ್ಲಿ ಈಗಾಗಲೇ ಗ್ಲೇಡ್ಸ್ ಕ್ರೀಡಾಂಗಣ ಹಾಗೂ ಜಯಚಾಮರಾಜೇಂದ್ರ ಎಂಜಿನಿಯ ರಿಂಗ್ ಕಾಲೇಜಿನ ಕ್ರೀಡಾಂಗಣದ ಉಸ್ತುವಾರಿ ವಹಿಸಿಕೊಡು ಅಭಿವೃದ್ಧಿಪಡಿಸಿದೆ. ಈಗ ಒಡಂಬಡಿಕೆ ಮಾಡಿಕೊಂಡಿರುವುದು ಮೂರನೇ ಮೈದಾನ. <br /> <br /> ಒಡಂಬಡಿಕೆ ಬಳಿಕ ಮಾತನಾಡಿದ ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ‘ಕ್ರಿಕೆಟ್ ಸಂಸ್ಥೆಯವರು ಈಗಾಗಲೇ ಗ್ಲೇಡ್ಸ್ ಕ್ರೀಡಾಂಗಣವನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಅಂಗಳದಲ್ಲಿ ಆಯೋಜಿಸಿದ ಕೆಪಿಎಲ್ ಪಂದ್ಯಗಳನ್ನು ವೀಕ್ಷಿಸಿ ಖುಷಿಪಟ್ಟವರಲ್ಲಿ ನಾನು ಕೂಡ ಒಬ್ಬ. ಕೆಎಸ್ಸಿಎ ಜೊತೆಗೂಡಿ ಕೆಲಸ ಮಾಡಲು ವಿ.ವಿ ಸಿದ್ಧವಾಗಿದೆ’ ಎಂದರು.<br /> <br /> ಕೆಎಸ್ಸಿಎ ಅಧ್ಯಕ್ಷ ಆರ್. ಅಶೋಕಾನಂದ ಅವರು, ‘ಮಹಾರಾಜ ಕಾಲೇಜಿನ ಈ ಮೈದಾನದಲ್ಲಿ ಆಡಿದ ಅನುಭವ ನನಗಿದೆ. ಶಫಿ ದಾರಾಶಾ, ಪಾರ್ಥಸಾರಥಿ, ಜಾವಗಲ್ ಶ್ರೀನಾಥ್ ಈ ಮೈದಾನದಲ್ಲಿ ಒಡಮೂಡಿದ ಪ್ರತಿಭೆಗಳು. ಈ ಮೈದಾನವನ್ನು ಗ್ಲೇಡ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸ ಲಾಗುವುದು’ ಎಂದು ಭರವಸೆ ನೀಡಿದರು.<br /> <br /> <strong>ಪ್ರಥಮದರ್ಜೆ ಪಂದ್ಯ ಆಯೋಜನೆ: </strong>‘ಬೆಂಗಳೂರು ಹೊರತುಪಡಿಸಿದರೆ ಹೆಚ್ಚು ಕ್ರಿಕೆಟ್ ಚಟುವಟಿಕೆಗಳು ನಡೆ ಯುವ ತಾಣ ಮೈಸೂರು. ಪ್ರಥಮದರ್ಜೆ ಪಂದ್ಯ ಆಡಲು ಸಾಧ್ಯವಾಗುವಂತೆ ಈ ಮೈದಾನ ಅಭಿವೃದ್ಧಿಪಡಿಸಲಿದ್ದೇವೆ. ಗ್ಲೇಡ್ಸ್ಗೆ ಹೋಲಿಸಿದರೆ ಈ ಮೈದಾನ ಚಿಕ್ಕದು. ಆದರೆ, ಸುಂದರ ಕ್ರೀಡಾಂಗಣ ವನ್ನಾಗಿ ನಿರ್ಮಿಸಲು ಪ್ರಯತ್ನಿಸುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ’ ಎಂದು ಬ್ರಿಜೇಶ್ ತಿಳಿಸಿದರು.<br /> </p>.<p><strong>150 ವರ್ಷಗಳ ಇತಿಹಾಸ...</strong><br /> ಮಹಾರಾಜ ಕಾಲೇಜಿನ ಕ್ರಿಕೆಟ್ ಮೈದಾನಕ್ಕೆ 150 ವರ್ಷಗಳ ಇತಿಹಾಸವಿದೆ. ಇದನ್ನು ಆಗ ಅಭಿವೃದ್ಧಿಪಡಿಸಿದ್ದು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಜೆ.ಸಿ. ರೋಲೊ.</p>.<p>ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣಕ್ಕೆ ಮುನ್ನ ಇಲ್ಲಿ ರಣಜಿ ಪಂದ್ಯಗಳು ನಡೆಯುತ್ತಿದ್ದವು. ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಇಲ್ಲಿನ ಮ್ಯಾಟ್ ಪಿಚ್ನಲ್ಲಿ ರಣಜಿ ಪಂದ್ಯ ಆಯೋಜಿಸಲಾಗಿತ್ತು. ಜಾವಗಲ್ ಶ್ರೀನಾಥ್ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರು ಈ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ.</p>.<p>ಈ ಮೈದಾನವು ಇದುವರೆಗೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಸ್ತುವಾರಿಯಲ್ಲಿತ್ತು. ಇದನ್ನು ಸ್ಪೋರ್ಟ್ಸ್ ಪೆವಿಲಿಯನ್ ಎಂದೂ ಕರೆಯಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>