<p><strong>ಮುಂಬೈ (ಪಿಟಿಐ/ಐಎಎನ್ಎಸ್): </strong>ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಕೊಚ್ಚಿ ಟಸ್ಕರ್ಸ್ ಕೇರಳ ಜೊತೆಗಿನ ಒಪ್ಪಂದವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರದ್ದುಮಾಡಿದೆ. <br /> <br /> ಬ್ಯಾಂಕ್ ಖಾತರಿ ಮೊತ್ತ ವನ್ನು ನೀಡಲು ತಂಡ ವಿಫಲವಾದ ಕಾರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ. <br /> ಇದರಿಂದ ಸಾಕಷ್ಟು ವಿವಾದಗಳೊಂದಿಯೇ ಐಪಿಎಲ್ಗೆ ಕಾಲಿರಿಸಿದ್ದ ಕೊಚ್ಚಿ ತಂಡ ಒಂದೇ ವರ್ಷದಲ್ಲಿ ಲೀಗ್ನಿಂದ ಹೊರಬಿದ್ದಿದೆ. ಸೋಮವಾರ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. <br /> <br /> `ಕೊಚ್ಚಿ ಫ್ರಾಂಚೈಸಿ ಒಪ್ಪಂದದ ನೀತಿ ಸಂಹಿತೆಯನ್ನು ಮುರಿದಿದೆ. ಇದರಿಂದ ಬಿಸಿಸಿಐ ತನ್ನ ವಶದಲ್ಲಿರುವ ಬ್ಯಾಂಕ್ ಖಾತರಿ ಮೊತ್ತವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಅದೇ ರೀತಿ ಕೊಚ್ಚಿ ತಂಡದ ಒಪ್ಪಂದವನ್ನು ರದ್ದುಮಾಡಿದೆ~ ಎಂದು ನೂತನ ಅಧ್ಯಕ್ಷ ಎನ್. ಶ್ರೀನಿವಾಸನ್ ನುಡಿದರು. <br /> <br /> ಮಂಡಳಿಯು ಕೊಚ್ಚಿ ತಂಡಕ್ಕೆ ಐಪಿಎಲ್ಗೆ ಮರಳಲು ಇನ್ನೊಂದು ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು, `ಇಲ್ಲ. ಕೊಚ್ಚಿ ತಂಡದ ನೀತಿ ಸಂಹಿತೆ ಉಲ್ಲಂಘಿಸಿದೆ. ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ~ ಎಂದು ಉತ್ತರಿಸಿದ್ದಾರೆ.<br /> <br /> ಮಂಡಳಿಯ ಜೊತೆಗಿನ ಒಪ್ಪಂದದ ಪ್ರಕಾರ ಫ್ರಾಂಚೈಸಿ ಪ್ರತಿ ವರ್ಷ 156 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತರಿ ರೂಪದಲ್ಲಿ ಪಾವತಿಸಬೇಕಿತ್ತು. ಆದರೆ ನಿಗದಿತ ದಿನಾಂಕದೊಳಗೆ ಇದನ್ನು ಪಾವತಿಸಲು ವಿಫಲವಾಗಿದೆ. <br /> <br /> ಕೊಚ್ಚಿ ತಂಡವನ್ನು ಹರಾಜಿನಲ್ಲಿ 1550 ಕೋಟಿ ರೂ.ಗೆ ಖರೀದಿಸಲಾಗಿತ್ತು. ಗುಜರಾತ್ ಮೂಲದ ಉದ್ಯಮಿಗಳು ತಂಡವನ್ನು ಖರೀದಿಸಿದ್ದರು. ಈ ವೇಳೆ ಮಾಡಿದ ಒಪ್ಪಂದದಂತೆ ಮುಂದಿನ 10 ವರ್ಷಗಳವರೆಗೆ ಬ್ಯಾಂಕ್ ಖಾತರಿ ಮೊತ್ತ ಪಾವತಿಸಬೇಕಾಗಿತ್ತು. <br /> <br /> <strong>ಕಾನೂನು ಹೋರಾಟ:</strong> ತಮ್ಮ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದ ಮಂಡಳಿಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಂಡದ ನಿರ್ದೇಶಕ ಮುಖೇಶ್ ಪಾಟೀಲ್ ಹೇಳಿದ್ದಾರೆ. `ನಾವು ಬಿಸಿಸಿಐಗೆ ನೀಡಲು ಯಾವುದೇ ಬಾಕಿ ಹಣ ಉಳಿದಿಲ್ಲ. ಮಂಡಳಿಯ ನಿರ್ಧಾರ ಕಾನೂನುಬಾಹಿರವಾದದ್ದು ಎಂದಿದ್ದಾರೆ.<br /> <br /> <strong>ರೂ. 190 ಕೋಟಿ ಲಾಭ<br /> ಮುಂಬೈ (ಪಿಟಿಐ):</strong> ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ 2010-11ರ ಅವಧಿಯಲ್ಲಿ 189.72 ಕೋಟಿ ರೂ. ನಿವ್ವಳ ಲಾಭ ಪಡೆದಿದೆ.<br /> <br /> ಬಿಸಿಸಿಐ ಖಜಾಂಚಿ ಎಂ.ಪಿ. ಪಾಂಡೋವ್ ತಮ್ಮ ವರದಿಯಲ್ಲಿ ಈ ವಿಷಯ ತಿಳಿಸಿದರು. ಮೂರು ವರ್ಷದ ಅಧಿಕಾರದ ಅವಧಿ ಪೂರ್ಣಗೊಂಡ ಕಾರಣ ಪಾಂಡೋವ್ ಸೋಮವಾರ ಹುದ್ದೆಯಿಂದ ಕೆಳಗಿಳಿದರು.<br /> <br /> 2010-11ರ ಅವಧಿಯಲ್ಲಿ ಬಿಸಿಸಿಐ ಒಟ್ಟು 2026.39 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಹೆಚ್ಚಿನ ಪಾಲು ಮಾಧ್ಯಮ ಪ್ರಸಾರ ಹಕ್ಕು (1047 ಕೋಟಿ) ಮತ್ತು ಪ್ರಾಯೋಜಕರಿಂದ (434.77 ಕೋಟಿ) ಬಂದಿವೆ. ಅದೇ ರೀತಿ ಐಪಿಎಲ್ ತಂಡಗಳ ಹರಾಜು (289.44 ಕೋಟಿ), ಐಸಿಸಿ/ ಏಷ್ಯನ್ ಕ್ರಿಕೆಟ್ ಸಮಿತಿ (104.80 ಕೋಟಿ), ಬಡ್ಡಿ ಮತ್ತು ಇತರ ಮೂಲಗಳಿಂದ (73.68 ಹಾಗೂ 76.63 ಕೋಟಿ) ಮಂಡಳಿಗೆ ಆದಾಯ ಲಭಿಸಿದೆ. ಈ ಅವಧಿಯಲ್ಲಿ ಮಂಡಳಿ ಒಟ್ಟು 1836.67 ಕೋಟಿ ರೂ. ಖರ್ಚು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ/ಐಎಎನ್ಎಸ್): </strong>ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಕೊಚ್ಚಿ ಟಸ್ಕರ್ಸ್ ಕೇರಳ ಜೊತೆಗಿನ ಒಪ್ಪಂದವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರದ್ದುಮಾಡಿದೆ. <br /> <br /> ಬ್ಯಾಂಕ್ ಖಾತರಿ ಮೊತ್ತ ವನ್ನು ನೀಡಲು ತಂಡ ವಿಫಲವಾದ ಕಾರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ. <br /> ಇದರಿಂದ ಸಾಕಷ್ಟು ವಿವಾದಗಳೊಂದಿಯೇ ಐಪಿಎಲ್ಗೆ ಕಾಲಿರಿಸಿದ್ದ ಕೊಚ್ಚಿ ತಂಡ ಒಂದೇ ವರ್ಷದಲ್ಲಿ ಲೀಗ್ನಿಂದ ಹೊರಬಿದ್ದಿದೆ. ಸೋಮವಾರ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. <br /> <br /> `ಕೊಚ್ಚಿ ಫ್ರಾಂಚೈಸಿ ಒಪ್ಪಂದದ ನೀತಿ ಸಂಹಿತೆಯನ್ನು ಮುರಿದಿದೆ. ಇದರಿಂದ ಬಿಸಿಸಿಐ ತನ್ನ ವಶದಲ್ಲಿರುವ ಬ್ಯಾಂಕ್ ಖಾತರಿ ಮೊತ್ತವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಅದೇ ರೀತಿ ಕೊಚ್ಚಿ ತಂಡದ ಒಪ್ಪಂದವನ್ನು ರದ್ದುಮಾಡಿದೆ~ ಎಂದು ನೂತನ ಅಧ್ಯಕ್ಷ ಎನ್. ಶ್ರೀನಿವಾಸನ್ ನುಡಿದರು. <br /> <br /> ಮಂಡಳಿಯು ಕೊಚ್ಚಿ ತಂಡಕ್ಕೆ ಐಪಿಎಲ್ಗೆ ಮರಳಲು ಇನ್ನೊಂದು ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು, `ಇಲ್ಲ. ಕೊಚ್ಚಿ ತಂಡದ ನೀತಿ ಸಂಹಿತೆ ಉಲ್ಲಂಘಿಸಿದೆ. ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ~ ಎಂದು ಉತ್ತರಿಸಿದ್ದಾರೆ.<br /> <br /> ಮಂಡಳಿಯ ಜೊತೆಗಿನ ಒಪ್ಪಂದದ ಪ್ರಕಾರ ಫ್ರಾಂಚೈಸಿ ಪ್ರತಿ ವರ್ಷ 156 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತರಿ ರೂಪದಲ್ಲಿ ಪಾವತಿಸಬೇಕಿತ್ತು. ಆದರೆ ನಿಗದಿತ ದಿನಾಂಕದೊಳಗೆ ಇದನ್ನು ಪಾವತಿಸಲು ವಿಫಲವಾಗಿದೆ. <br /> <br /> ಕೊಚ್ಚಿ ತಂಡವನ್ನು ಹರಾಜಿನಲ್ಲಿ 1550 ಕೋಟಿ ರೂ.ಗೆ ಖರೀದಿಸಲಾಗಿತ್ತು. ಗುಜರಾತ್ ಮೂಲದ ಉದ್ಯಮಿಗಳು ತಂಡವನ್ನು ಖರೀದಿಸಿದ್ದರು. ಈ ವೇಳೆ ಮಾಡಿದ ಒಪ್ಪಂದದಂತೆ ಮುಂದಿನ 10 ವರ್ಷಗಳವರೆಗೆ ಬ್ಯಾಂಕ್ ಖಾತರಿ ಮೊತ್ತ ಪಾವತಿಸಬೇಕಾಗಿತ್ತು. <br /> <br /> <strong>ಕಾನೂನು ಹೋರಾಟ:</strong> ತಮ್ಮ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದ ಮಂಡಳಿಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಂಡದ ನಿರ್ದೇಶಕ ಮುಖೇಶ್ ಪಾಟೀಲ್ ಹೇಳಿದ್ದಾರೆ. `ನಾವು ಬಿಸಿಸಿಐಗೆ ನೀಡಲು ಯಾವುದೇ ಬಾಕಿ ಹಣ ಉಳಿದಿಲ್ಲ. ಮಂಡಳಿಯ ನಿರ್ಧಾರ ಕಾನೂನುಬಾಹಿರವಾದದ್ದು ಎಂದಿದ್ದಾರೆ.<br /> <br /> <strong>ರೂ. 190 ಕೋಟಿ ಲಾಭ<br /> ಮುಂಬೈ (ಪಿಟಿಐ):</strong> ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ 2010-11ರ ಅವಧಿಯಲ್ಲಿ 189.72 ಕೋಟಿ ರೂ. ನಿವ್ವಳ ಲಾಭ ಪಡೆದಿದೆ.<br /> <br /> ಬಿಸಿಸಿಐ ಖಜಾಂಚಿ ಎಂ.ಪಿ. ಪಾಂಡೋವ್ ತಮ್ಮ ವರದಿಯಲ್ಲಿ ಈ ವಿಷಯ ತಿಳಿಸಿದರು. ಮೂರು ವರ್ಷದ ಅಧಿಕಾರದ ಅವಧಿ ಪೂರ್ಣಗೊಂಡ ಕಾರಣ ಪಾಂಡೋವ್ ಸೋಮವಾರ ಹುದ್ದೆಯಿಂದ ಕೆಳಗಿಳಿದರು.<br /> <br /> 2010-11ರ ಅವಧಿಯಲ್ಲಿ ಬಿಸಿಸಿಐ ಒಟ್ಟು 2026.39 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಹೆಚ್ಚಿನ ಪಾಲು ಮಾಧ್ಯಮ ಪ್ರಸಾರ ಹಕ್ಕು (1047 ಕೋಟಿ) ಮತ್ತು ಪ್ರಾಯೋಜಕರಿಂದ (434.77 ಕೋಟಿ) ಬಂದಿವೆ. ಅದೇ ರೀತಿ ಐಪಿಎಲ್ ತಂಡಗಳ ಹರಾಜು (289.44 ಕೋಟಿ), ಐಸಿಸಿ/ ಏಷ್ಯನ್ ಕ್ರಿಕೆಟ್ ಸಮಿತಿ (104.80 ಕೋಟಿ), ಬಡ್ಡಿ ಮತ್ತು ಇತರ ಮೂಲಗಳಿಂದ (73.68 ಹಾಗೂ 76.63 ಕೋಟಿ) ಮಂಡಳಿಗೆ ಆದಾಯ ಲಭಿಸಿದೆ. ಈ ಅವಧಿಯಲ್ಲಿ ಮಂಡಳಿ ಒಟ್ಟು 1836.67 ಕೋಟಿ ರೂ. ಖರ್ಚು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>