<p><strong>ಮಡಗಾಂವ್ (ಪಿಟಿಐ): </strong>ಭಾರತ ತಂಡ ಬುಧವಾರ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.</p>.<p>ಕಳೆದ ವರ್ಷ ನೇಪಾಳದಲ್ಲಿ ನಡೆದ ಸ್ಯಾಪ್ (ಎಸ್ಎಎಫ್ಎಫ್) ಕಪ್ ಚಾಂಪಿಯನ್ಷಿಪ್ನಲ್ಲಿ ಉಭಯ ತಂಡಗಳು ಎದುರಾಗಿದ್ದವು. ಈ ಪಂದ್ಯ 1–1ರಲ್ಲಿ ಡ್ರಾ ಕಂಡಿತ್ತು. ಇದಾದ ಬಳಿಕ ಎರಡೂ ತಂಡಗಳು ಮುಖಾಮುಖಿಯಾಗುತ್ತಿ ರುವುದು ಇದೇ ಮೊದಲು.<br /> ನಾಯಕ ಸುನಿಲ್ ಚೆಟ್ರಿ, ಸುಬ್ರತಾ ಪಾಲ್, ಅರ್ಮಿಂಧರ್ ಸಿಂಗ್ ಸೇರಿದಂತೆ ಬಲಿಷ್ಠ ಆಟಗಾರರಿಂದ ಕೂಡಿರುವ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯುವ ಉತ್ಸಾಹದಲ್ಲಿದೆ.<br /> <br /> ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಗೋಲ್ ಕೀಪರ್ಗಳಾದ ಸುಬ್ರತಾ ಪಾಲ್ ಮತ್ತು ಅರ್ಮಿಂಧರ್ ಸಿಂಗ್, ಡಿಫೆಂಡರ್, ಸಂದೇಶ್ ಜಿಂಗಾನ್, ಮಿಡ್ ಫೀಲ್ಡರ್ ಆಲ್ವಿನ್ ಜಾರ್ಜ್ ಹಾಗೂ ಸ್ಟ್ರೈಕರ್್ ಬಲವಂತ್ ಸಿಂಗ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.<br /> ‘ನಾವು ಸ್ಯಾಪ್ ಕಪ್ ಚಾಂಪಿಯನ್ಷಿಪ್ನಲ್ಲಿ ಕಡೆಯದಾಗಿ ಬಾಂಗ್ಲಾ ಎದುರು ಆಡಿದ್ದೆವು. ಈ ಪಂದ್ಯ ರೋಮಾಂಚನಕಾರಿಯಾಗಿತ್ತು.</p>.<p>ಪಂದ್ಯದ ಅಂತಿಮ ಕ್ಷಣದಲ್ಲಿ ಚೆಟ್ರಿ ಗಳಿಸಿದ ಗೋಲಿನಿಂದಾಗಿ ನಾವು ಸಮಬಲ ಸಾಧಿಸಿ, ನಮ್ಮ ಎದುರು ಮೊದಲ ಗೆಲುವಿನ ಸಿಹಿ ಕಾಣ ಬೇಕೆಂದಿದ್ದ ಬಾಂಗ್ಲಾ ಕನಸಿಗೆ ತಣ್ಣೀರೆರೆಚಿದ್ದೆವು’ ಎಂದು ಕೋಚ್ ಕೋವರ್ಮನ್ಸ್್ ನೆನಪುಗಳನ್ನು ಮೆಲುಕು ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಗಾಂವ್ (ಪಿಟಿಐ): </strong>ಭಾರತ ತಂಡ ಬುಧವಾರ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.</p>.<p>ಕಳೆದ ವರ್ಷ ನೇಪಾಳದಲ್ಲಿ ನಡೆದ ಸ್ಯಾಪ್ (ಎಸ್ಎಎಫ್ಎಫ್) ಕಪ್ ಚಾಂಪಿಯನ್ಷಿಪ್ನಲ್ಲಿ ಉಭಯ ತಂಡಗಳು ಎದುರಾಗಿದ್ದವು. ಈ ಪಂದ್ಯ 1–1ರಲ್ಲಿ ಡ್ರಾ ಕಂಡಿತ್ತು. ಇದಾದ ಬಳಿಕ ಎರಡೂ ತಂಡಗಳು ಮುಖಾಮುಖಿಯಾಗುತ್ತಿ ರುವುದು ಇದೇ ಮೊದಲು.<br /> ನಾಯಕ ಸುನಿಲ್ ಚೆಟ್ರಿ, ಸುಬ್ರತಾ ಪಾಲ್, ಅರ್ಮಿಂಧರ್ ಸಿಂಗ್ ಸೇರಿದಂತೆ ಬಲಿಷ್ಠ ಆಟಗಾರರಿಂದ ಕೂಡಿರುವ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯುವ ಉತ್ಸಾಹದಲ್ಲಿದೆ.<br /> <br /> ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಗೋಲ್ ಕೀಪರ್ಗಳಾದ ಸುಬ್ರತಾ ಪಾಲ್ ಮತ್ತು ಅರ್ಮಿಂಧರ್ ಸಿಂಗ್, ಡಿಫೆಂಡರ್, ಸಂದೇಶ್ ಜಿಂಗಾನ್, ಮಿಡ್ ಫೀಲ್ಡರ್ ಆಲ್ವಿನ್ ಜಾರ್ಜ್ ಹಾಗೂ ಸ್ಟ್ರೈಕರ್್ ಬಲವಂತ್ ಸಿಂಗ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.<br /> ‘ನಾವು ಸ್ಯಾಪ್ ಕಪ್ ಚಾಂಪಿಯನ್ಷಿಪ್ನಲ್ಲಿ ಕಡೆಯದಾಗಿ ಬಾಂಗ್ಲಾ ಎದುರು ಆಡಿದ್ದೆವು. ಈ ಪಂದ್ಯ ರೋಮಾಂಚನಕಾರಿಯಾಗಿತ್ತು.</p>.<p>ಪಂದ್ಯದ ಅಂತಿಮ ಕ್ಷಣದಲ್ಲಿ ಚೆಟ್ರಿ ಗಳಿಸಿದ ಗೋಲಿನಿಂದಾಗಿ ನಾವು ಸಮಬಲ ಸಾಧಿಸಿ, ನಮ್ಮ ಎದುರು ಮೊದಲ ಗೆಲುವಿನ ಸಿಹಿ ಕಾಣ ಬೇಕೆಂದಿದ್ದ ಬಾಂಗ್ಲಾ ಕನಸಿಗೆ ತಣ್ಣೀರೆರೆಚಿದ್ದೆವು’ ಎಂದು ಕೋಚ್ ಕೋವರ್ಮನ್ಸ್್ ನೆನಪುಗಳನ್ನು ಮೆಲುಕು ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>