<p>ಬೆಂಗಳೂರು: ಡೇವಿಸ್ ಕಪ್ ಆಟಗಾರ ವಿಷ್ಣುವರ್ಧನ್ ಮತ್ತು ಚೀನಾ ತೈಪಿಯ ಟಿ ಚೆನ್ ಇಲ್ಲಿ ನಡೆಯುತ್ತಿರುವ ಐಟಿಎಫ್ ಪುರುಷರ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಇಬ್ಬರೂ ಪ್ರಯಾಸದ ಗೆಲುವು ಪಡೆದು ಫೈನಲ್ಗೆ ಲಗ್ಗೆಯಿಟ್ಟರು.<br /> <br /> ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ವಿಷ್ಣುವರ್ಧನ್ 6-4, 6-7, 6-3 ರಲ್ಲಿ ರಂಜೀತ್ ವಿ ಮುರುಗೇಶನ್ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಚೆನ್ 3-6, 7-6, 6-4 ರಲ್ಲಿ ಜೀವನ್ ನೆಡುಂಚೆಳಿಯನ್ ವಿರುದ್ಧ ಜಯ ಸಾಧಿಸಿದರು. <br /> <br /> ಮೈಸೂರಿನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ವಿಷ್ಣು ಮೊದಲ ಸೆಟ್ನ್ನು ಸುಲಭದಲ್ಲಿ ಗೆದ್ದುಕೊಂಡರು. ಆದರೆ ತಿರುಗೇಟು ನೀಡಿದ ರಂಜೀತ್ ಎರಡನೇ ಸೆಟ್ನ್ನು ಟೈಬ್ರೇಕರ್ನಲ್ಲಿ ತಮ್ಮದಾಗಿಸಿಕೊಂಡರು. ಅಂತಿಮ ಸೆಟ್ನಲ್ಲಿ ಲಯ ಕಂಡುಕೊಂಡ ವಿಷ್ಣುವರ್ಧನ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು.<br /> <br /> `ಪಂದ್ಯ ಕಠಿಣವಾಗಿತ್ತು. ಸರ್ವ್ಗಳೇ ನನ್ನ ಬಲ. ಆದ್ದರಿಂದ ಪಂದ್ಯದಲ್ಲಿ ಸರ್ವ್ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಗೆಲುವು ಪಡೆಯಲು ಸಾಧ್ಯವಾದದ್ದು ಸಂತಸ ಉಂಟುಮಾಡಿದೆ~ ಎಂದು ಪಂದ್ಯದ ಬಳಿಕ ವಿಷ್ಣುವರ್ಧನ್ ಪ್ರತಿಕ್ರಿಯಿಸಿದರು. <br /> <br /> 28ರ ಹರೆಯದ ಚೆನ್ ಕೂಡಾ ಗೆಲುವಿನ ಹಾದಿಯಲ್ಲಿ ಸಾಕಷ್ಟು ಪ್ರಯಾಸಪಟ್ಟರು. ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದ ಅವರು ಎರಡನೇ ಸೆಟ್ನ ಟೈಬ್ರೇಕರ್ನಲ್ಲಿ 3-6 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆ ಬಳಿಕ ಅಸಾಮಾನ್ಯ ರೀತಿಯಲ್ಲಿ ತಿರುಗೇಟು ನೀಡಿ ಗೆಲುವಿನ ನಗು ಬೀರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಡೇವಿಸ್ ಕಪ್ ಆಟಗಾರ ವಿಷ್ಣುವರ್ಧನ್ ಮತ್ತು ಚೀನಾ ತೈಪಿಯ ಟಿ ಚೆನ್ ಇಲ್ಲಿ ನಡೆಯುತ್ತಿರುವ ಐಟಿಎಫ್ ಪುರುಷರ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಇಬ್ಬರೂ ಪ್ರಯಾಸದ ಗೆಲುವು ಪಡೆದು ಫೈನಲ್ಗೆ ಲಗ್ಗೆಯಿಟ್ಟರು.<br /> <br /> ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ವಿಷ್ಣುವರ್ಧನ್ 6-4, 6-7, 6-3 ರಲ್ಲಿ ರಂಜೀತ್ ವಿ ಮುರುಗೇಶನ್ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಚೆನ್ 3-6, 7-6, 6-4 ರಲ್ಲಿ ಜೀವನ್ ನೆಡುಂಚೆಳಿಯನ್ ವಿರುದ್ಧ ಜಯ ಸಾಧಿಸಿದರು. <br /> <br /> ಮೈಸೂರಿನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ವಿಷ್ಣು ಮೊದಲ ಸೆಟ್ನ್ನು ಸುಲಭದಲ್ಲಿ ಗೆದ್ದುಕೊಂಡರು. ಆದರೆ ತಿರುಗೇಟು ನೀಡಿದ ರಂಜೀತ್ ಎರಡನೇ ಸೆಟ್ನ್ನು ಟೈಬ್ರೇಕರ್ನಲ್ಲಿ ತಮ್ಮದಾಗಿಸಿಕೊಂಡರು. ಅಂತಿಮ ಸೆಟ್ನಲ್ಲಿ ಲಯ ಕಂಡುಕೊಂಡ ವಿಷ್ಣುವರ್ಧನ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು.<br /> <br /> `ಪಂದ್ಯ ಕಠಿಣವಾಗಿತ್ತು. ಸರ್ವ್ಗಳೇ ನನ್ನ ಬಲ. ಆದ್ದರಿಂದ ಪಂದ್ಯದಲ್ಲಿ ಸರ್ವ್ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಗೆಲುವು ಪಡೆಯಲು ಸಾಧ್ಯವಾದದ್ದು ಸಂತಸ ಉಂಟುಮಾಡಿದೆ~ ಎಂದು ಪಂದ್ಯದ ಬಳಿಕ ವಿಷ್ಣುವರ್ಧನ್ ಪ್ರತಿಕ್ರಿಯಿಸಿದರು. <br /> <br /> 28ರ ಹರೆಯದ ಚೆನ್ ಕೂಡಾ ಗೆಲುವಿನ ಹಾದಿಯಲ್ಲಿ ಸಾಕಷ್ಟು ಪ್ರಯಾಸಪಟ್ಟರು. ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದ ಅವರು ಎರಡನೇ ಸೆಟ್ನ ಟೈಬ್ರೇಕರ್ನಲ್ಲಿ 3-6 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆ ಬಳಿಕ ಅಸಾಮಾನ್ಯ ರೀತಿಯಲ್ಲಿ ತಿರುಗೇಟು ನೀಡಿ ಗೆಲುವಿನ ನಗು ಬೀರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>