<p><strong>ನವದೆಹಲಿ (ಐಎಎನ್ಎಸ್):</strong> ಮಹೇಶ್ ಭೂಪತಿ ಮುಂದಿನ ತಿಂಗಳು ನಡೆಯುವ ಉಜ್ಬೆಕಿಸ್ತಾನ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಆಡಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತಿಳಿಸಿದೆ.<br /> <br /> ಏಷ್ಯಾ-ಓಸೀನಿಯ ಒಂದನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಉಜ್ಬೆಕಿಸ್ತಾನವನ್ನು ಎದುರಿಸಲಿದೆ. ಡೇವಿಸ್ ಕಪ್ ತಂಡದ ನಾಯಕ ಎಸ್.ಪಿ. ಮಿಶ್ರಾ ತಂಡದಲ್ಲಿ ಇಬ್ಬರು `ಸ್ಪೆಶಲಿಸ್ಟ್~ ಸಿಂಗಲ್ಸ್ ಆಟಗಾರರನ್ನು ಬಯಸಿದ್ದರು. ಈ ಕಾರಣ ಡಬಲ್ಸ್ ಆಟಗಾರರಾದ ಪೇಸ್, ಭೂಪತಿ ಮತ್ತು ಬೋಪಣ್ಣ ಅವರಲ್ಲಿ ಇಬ್ಬರಿಗೆ ಮಾತ್ರ ತಂಡದಲ್ಲಿ ಅವಕಾಶ ಇತ್ತು.<br /> <br /> ಪೇಸ್ ಹಾಗೂ ಬೋಪಣ್ಣ ಸೂಕ್ತ ಜೊತೆಗಾರರು ಎಂಬ ಕಾರಣ ಭೂಪತಿ ಹಿಂದೆ ಸರಿದರು ಎಂದು ಎಐಟಿಎ ಕಾರ್ಯದರ್ಶಿ ಅನಿಲ್ ಖನ್ನಾ ನುಡಿದರು. ಅಗತ್ಯಬಿದ್ದಲ್ಲಿ ಬೋಪಣ್ಣ ಸಿಂಗಲ್ಸ್ ಪಂದ್ಯದಲ್ಲೂ ಆಡಬಲ್ಲರು ಎಂಬುದು ಭೂಪತಿ ನಿರ್ಧಾರದ ಹಿಂದಿನ ಮತ್ತೊಂದು ಕಾರಣ.<br /> <br /> ಅನಿಲ್ ಧೂಪರ್ ನೇತೃತ್ವದ ನಾಲ್ಕು ಸದಸ್ಯರ ಆಯ್ಕೆ ಸಮಿತಿ ಸೋಮದೇವ್ ದೇವವರ್ಮನ್ ಅವರನ್ನು ತಂಡಕ್ಕೆ ಪರಿಗಣಿಸಲಿಲ್ಲ. ಗಾಯದಿಂದ ಬಳಲುತ್ತಿರುವ ಸೋಮದೇವ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಯೂಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ಅವಕಾಶ ಗಿಟ್ಟಿಸಿದ್ದಾರೆ. ವಿಷ್ಣುವರ್ಧನ್ `ರಿಸರ್ವ್ ಆಟಗಾರ~ನಾಗಿ ಸ್ಥಾನ ಪಡೆದಿದ್ದಾರೆ. <br /> <br /> <strong>ಡೇವಿಸ್ ಕಪ್ ತಂಡ:</strong> ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ಸನಮ್ ಸಿಂಗ್ ಮತ್ತು ವಿಷ್ಣುವರ್ಧನ್ (ರಿಸರ್ವ್ ಆಟಗಾರ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ಮಹೇಶ್ ಭೂಪತಿ ಮುಂದಿನ ತಿಂಗಳು ನಡೆಯುವ ಉಜ್ಬೆಕಿಸ್ತಾನ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಆಡಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತಿಳಿಸಿದೆ.<br /> <br /> ಏಷ್ಯಾ-ಓಸೀನಿಯ ಒಂದನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಉಜ್ಬೆಕಿಸ್ತಾನವನ್ನು ಎದುರಿಸಲಿದೆ. ಡೇವಿಸ್ ಕಪ್ ತಂಡದ ನಾಯಕ ಎಸ್.ಪಿ. ಮಿಶ್ರಾ ತಂಡದಲ್ಲಿ ಇಬ್ಬರು `ಸ್ಪೆಶಲಿಸ್ಟ್~ ಸಿಂಗಲ್ಸ್ ಆಟಗಾರರನ್ನು ಬಯಸಿದ್ದರು. ಈ ಕಾರಣ ಡಬಲ್ಸ್ ಆಟಗಾರರಾದ ಪೇಸ್, ಭೂಪತಿ ಮತ್ತು ಬೋಪಣ್ಣ ಅವರಲ್ಲಿ ಇಬ್ಬರಿಗೆ ಮಾತ್ರ ತಂಡದಲ್ಲಿ ಅವಕಾಶ ಇತ್ತು.<br /> <br /> ಪೇಸ್ ಹಾಗೂ ಬೋಪಣ್ಣ ಸೂಕ್ತ ಜೊತೆಗಾರರು ಎಂಬ ಕಾರಣ ಭೂಪತಿ ಹಿಂದೆ ಸರಿದರು ಎಂದು ಎಐಟಿಎ ಕಾರ್ಯದರ್ಶಿ ಅನಿಲ್ ಖನ್ನಾ ನುಡಿದರು. ಅಗತ್ಯಬಿದ್ದಲ್ಲಿ ಬೋಪಣ್ಣ ಸಿಂಗಲ್ಸ್ ಪಂದ್ಯದಲ್ಲೂ ಆಡಬಲ್ಲರು ಎಂಬುದು ಭೂಪತಿ ನಿರ್ಧಾರದ ಹಿಂದಿನ ಮತ್ತೊಂದು ಕಾರಣ.<br /> <br /> ಅನಿಲ್ ಧೂಪರ್ ನೇತೃತ್ವದ ನಾಲ್ಕು ಸದಸ್ಯರ ಆಯ್ಕೆ ಸಮಿತಿ ಸೋಮದೇವ್ ದೇವವರ್ಮನ್ ಅವರನ್ನು ತಂಡಕ್ಕೆ ಪರಿಗಣಿಸಲಿಲ್ಲ. ಗಾಯದಿಂದ ಬಳಲುತ್ತಿರುವ ಸೋಮದೇವ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಯೂಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ಅವಕಾಶ ಗಿಟ್ಟಿಸಿದ್ದಾರೆ. ವಿಷ್ಣುವರ್ಧನ್ `ರಿಸರ್ವ್ ಆಟಗಾರ~ನಾಗಿ ಸ್ಥಾನ ಪಡೆದಿದ್ದಾರೆ. <br /> <br /> <strong>ಡೇವಿಸ್ ಕಪ್ ತಂಡ:</strong> ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ಸನಮ್ ಸಿಂಗ್ ಮತ್ತು ವಿಷ್ಣುವರ್ಧನ್ (ರಿಸರ್ವ್ ಆಟಗಾರ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>