<p><strong>ಗ್ರಾಸ್ ಐಸ್ಲೆಟ್ (ಪಿಟಿಐ): </strong> ಹಲವು ಕೊರತೆಗಳ ನಡುವೆಯೂ ಭಾರತದ ಕ್ರೀಡಾಪಟುಗಳು ರಿಯೊ ಒಲಿಂಪಿಕ್ಸ್ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಪದಕ ಗೆಲ್ಲದ ಅಥ್ಲೀಟ್ಗಳ ಕುರಿತು ಕಠೋರವಾದ ಟೀಕೆಗಳನ್ನು ಮಾಡುವುದು ಸಲ್ಲದು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.<br /> <br /> ವೆಸ್ಟ್ ಇಂಡೀಸ್ ಎದುರಿನ ಮೂರನೇ ಟೆಸ್ಟ್ನಲ್ಲಿ ಗೆದ್ದ ಭಾರತ ತಂಡವು ಸರಣಿಯನ್ನೂ ಕೈವಶ ಮಾಡಿ ಕೊಂಡಿತ್ತು. ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> ‘ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳು ಮಾಡಿರುವ ಸಿದ್ದತೆ ಗಳನ್ನು ಅವಲೋಕಿಸಬೇಕು. ಅವರು ಸಾಕಷ್ಟು ಪರಿಶ್ರಮ, ತ್ಯಾಗ, ಸಮರ್ಪಣಾ ಭಾವದಿಂದ ಅಭ್ಯಾಸ ಮಾಡಿರುತ್ತಾರೆ. ಆದರೆ, ಪದಕ ಜಯಿಸದೇ ಇದ್ದಾಗ ಜನರು ಹಗುರವಾಗಿ ಮಾತನಾಡುತ್ತಾರೆ. ಆ ರೀತಿಯ ಧೋರಣೆ ಇರಬಾರದು. ಕ್ರಿಕೆಟ್ನಲ್ಲಿಯೂ ಎಲ್ಲ ಪಂದ್ಯಗಳ ಲ್ಲಿಯೂ ಗೆಲ್ಲುವುದು ಸಾಧ್ಯವಿಲ್ಲ. ಪ್ರತಿಯೊಂದು ಪಂದ್ಯವೂ ವಿಭಿನ್ನ’ ಎಂದು ಕೊಹ್ಲಿ ಹೇಳಿದ್ದಾರೆ.<br /> <br /> ‘ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠ ಸೌಲಭ್ಯಗಳನ್ನು ನಮ್ಮ ಕೆಲವು ಅಥ್ಲೀಟ್ಗಳು ಬಳಸಿರುತ್ತಾರೆ. ಆದರೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುತ್ತಾರೆ. ಅವರನ್ನು ಅಭಿನಂದಿಸಬೇಕು ಮತ್ತು ಪ್ರೋತ್ಸಾಹಿಸಬೇಕು’ ಕೊಹ್ಲಿ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ರಾಸ್ ಐಸ್ಲೆಟ್ (ಪಿಟಿಐ): </strong> ಹಲವು ಕೊರತೆಗಳ ನಡುವೆಯೂ ಭಾರತದ ಕ್ರೀಡಾಪಟುಗಳು ರಿಯೊ ಒಲಿಂಪಿಕ್ಸ್ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಪದಕ ಗೆಲ್ಲದ ಅಥ್ಲೀಟ್ಗಳ ಕುರಿತು ಕಠೋರವಾದ ಟೀಕೆಗಳನ್ನು ಮಾಡುವುದು ಸಲ್ಲದು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.<br /> <br /> ವೆಸ್ಟ್ ಇಂಡೀಸ್ ಎದುರಿನ ಮೂರನೇ ಟೆಸ್ಟ್ನಲ್ಲಿ ಗೆದ್ದ ಭಾರತ ತಂಡವು ಸರಣಿಯನ್ನೂ ಕೈವಶ ಮಾಡಿ ಕೊಂಡಿತ್ತು. ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> ‘ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳು ಮಾಡಿರುವ ಸಿದ್ದತೆ ಗಳನ್ನು ಅವಲೋಕಿಸಬೇಕು. ಅವರು ಸಾಕಷ್ಟು ಪರಿಶ್ರಮ, ತ್ಯಾಗ, ಸಮರ್ಪಣಾ ಭಾವದಿಂದ ಅಭ್ಯಾಸ ಮಾಡಿರುತ್ತಾರೆ. ಆದರೆ, ಪದಕ ಜಯಿಸದೇ ಇದ್ದಾಗ ಜನರು ಹಗುರವಾಗಿ ಮಾತನಾಡುತ್ತಾರೆ. ಆ ರೀತಿಯ ಧೋರಣೆ ಇರಬಾರದು. ಕ್ರಿಕೆಟ್ನಲ್ಲಿಯೂ ಎಲ್ಲ ಪಂದ್ಯಗಳ ಲ್ಲಿಯೂ ಗೆಲ್ಲುವುದು ಸಾಧ್ಯವಿಲ್ಲ. ಪ್ರತಿಯೊಂದು ಪಂದ್ಯವೂ ವಿಭಿನ್ನ’ ಎಂದು ಕೊಹ್ಲಿ ಹೇಳಿದ್ದಾರೆ.<br /> <br /> ‘ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠ ಸೌಲಭ್ಯಗಳನ್ನು ನಮ್ಮ ಕೆಲವು ಅಥ್ಲೀಟ್ಗಳು ಬಳಸಿರುತ್ತಾರೆ. ಆದರೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುತ್ತಾರೆ. ಅವರನ್ನು ಅಭಿನಂದಿಸಬೇಕು ಮತ್ತು ಪ್ರೋತ್ಸಾಹಿಸಬೇಕು’ ಕೊಹ್ಲಿ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>