<p>ಧರ್ಮಶಾಲಾ (ಪಿಟಿಐ): ಉತ್ತರ ವಲಯ ತಂಡವನ್ನು 113 ರನ್ಗಳಿಂದ ಮಣಿಸಿದ ಪಶ್ಚಿಮ ವಲಯ ತಂಡ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. <br /> <br /> ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ನಲ್ಲಿ ಪಶ್ಚಿಮ ವಲಯ ಆಲ್ರೌಂಡ್ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ತಂಡ 50 ಓವರ್ಗಳಲ್ಲಿ 4 ವಿಕೆಟ್ಗೆ 355 ರನ್ ಪೇರಿಸಿತಲ್ಲದೆ, ಎದುರಾಳಿ ತಂಡವನ್ನು 42.2 ಓವರ್ಗಳಲ್ಲಿ 242 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.<br /> <br /> ಭಾರತ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವ ಮುನಾಫ್ ಪಟೇಲ್ (34ಕ್ಕೆ 4) ಹಾಗೂ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ (68ಕ್ಕೆ 4) ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಉತ್ತರ ವಲಯದ ಬ್ಯಾಟ್ಸ್ಮನ್ಗಳು ವಿಫಲರಾದರು. <br /> <br /> ಇದಕ್ಕೂ ಮುನ್ನ ಟಾಸ್ ಗೆದ್ದ ಉತ್ತರ ವಲಯ ತಂಡದ ನಾಯಕ ಹರಭಜನ್ ಸಿಂಗ್ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಕಳುಹಿಸಿ ದೊಡ್ಡ ತಪ್ಪು ಮಾಡಿದರು. ಅಜಿಂಕ್ಯ ರಹಾನೆ (118, 122 ಎಸೆತ, 15 ಬೌಂ, 1 ಸಿಕ್ಸರ್) ಗಳಿಸಿದ ಶತಕ ಹಾಗೂ ಪಾರ್ಥಿವ್ ಪಟೇಲ್ (78, 63 ಎಸೆತ, 14 ಬೌಂ), ಚೇತೇಶ್ವರ ಪೂಜಾರ (71, 67 ಎಸೆತ, 8 ಬೌಂ) ಮತ್ತು ಕೇದಾರ್ ಜಾದವ್ (ಅಜೇಯ 67, 43 ಎಸೆತ, 7 ಬೌಂ, 3 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ ಪಶ್ಚಿಮ ವಲಯ ಬೃಹತ್ ಮೊತ್ತ ಪೇರಿಸಿತು. <br /> <br /> <strong>ಸಂಕ್ಷಿಪ್ತ ಸ್ಕೋರ್: </strong>ಪಶ್ಚಿಮ ವಲಯ: 50 ಓವರ್ಗಳಲ್ಲಿ 4 ವಿಕೆಟ್ಗೆ 355 (ಪಾರ್ಥಿವ್ ಪಟೇಲ್ 78, ಅಜಿಂಕ್ಯ ರಹಾನೆ 118, ಚೇತೇಶ್ವರ ಪೂಜಾರ 71, ಕೇದಾರ್ ಜಾಧವ್ ಅಜೇಯ 67, ಪ್ರದೀಪ್ ಸಂಗ್ವಾನ್ 63ಕ್ಕೆ 2, ಬಿಪುಲ್ ಶರ್ಮ 49ಕ್ಕೆ 1, ಹರಭಜನ್ ಸಿಂಗ್ 56ಕ್ಕೆ 1). ಉತ್ತರ ವಲಯ: 42.2 ಓವರ್ಗಳಲ್ಲಿ 242 (ಮನ್ದೀಪ್ ಸಿಂಗ್ 46, ಬಿಪುಲ್ ಶರ್ಮಾ 68, ಹರಭಜನ್ ಸಿಂಗ್ 30, ಮನ್ಪ್ರೀತ್ ಗೋನಿ 28, ರಿಶಿ ಧವನ್ ಔಟಾಗದೆ 25, ಮುನಾಫ್ ಪಟೇಲ್ 34ಕ್ಕೆ 4, ಇಕ್ಬಾಲ್ ಅಬ್ದುಲ್ಲಾ 68ಕ್ಕೆ 4). ಫಲಿತಾಂಶ: ಪಶ್ಚಿಮ ವಲಯಕ್ಕೆ 113 ರನ್ ಗೆಲುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧರ್ಮಶಾಲಾ (ಪಿಟಿಐ): ಉತ್ತರ ವಲಯ ತಂಡವನ್ನು 113 ರನ್ಗಳಿಂದ ಮಣಿಸಿದ ಪಶ್ಚಿಮ ವಲಯ ತಂಡ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. <br /> <br /> ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ನಲ್ಲಿ ಪಶ್ಚಿಮ ವಲಯ ಆಲ್ರೌಂಡ್ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ತಂಡ 50 ಓವರ್ಗಳಲ್ಲಿ 4 ವಿಕೆಟ್ಗೆ 355 ರನ್ ಪೇರಿಸಿತಲ್ಲದೆ, ಎದುರಾಳಿ ತಂಡವನ್ನು 42.2 ಓವರ್ಗಳಲ್ಲಿ 242 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.<br /> <br /> ಭಾರತ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವ ಮುನಾಫ್ ಪಟೇಲ್ (34ಕ್ಕೆ 4) ಹಾಗೂ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ (68ಕ್ಕೆ 4) ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಉತ್ತರ ವಲಯದ ಬ್ಯಾಟ್ಸ್ಮನ್ಗಳು ವಿಫಲರಾದರು. <br /> <br /> ಇದಕ್ಕೂ ಮುನ್ನ ಟಾಸ್ ಗೆದ್ದ ಉತ್ತರ ವಲಯ ತಂಡದ ನಾಯಕ ಹರಭಜನ್ ಸಿಂಗ್ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಕಳುಹಿಸಿ ದೊಡ್ಡ ತಪ್ಪು ಮಾಡಿದರು. ಅಜಿಂಕ್ಯ ರಹಾನೆ (118, 122 ಎಸೆತ, 15 ಬೌಂ, 1 ಸಿಕ್ಸರ್) ಗಳಿಸಿದ ಶತಕ ಹಾಗೂ ಪಾರ್ಥಿವ್ ಪಟೇಲ್ (78, 63 ಎಸೆತ, 14 ಬೌಂ), ಚೇತೇಶ್ವರ ಪೂಜಾರ (71, 67 ಎಸೆತ, 8 ಬೌಂ) ಮತ್ತು ಕೇದಾರ್ ಜಾದವ್ (ಅಜೇಯ 67, 43 ಎಸೆತ, 7 ಬೌಂ, 3 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ ಪಶ್ಚಿಮ ವಲಯ ಬೃಹತ್ ಮೊತ್ತ ಪೇರಿಸಿತು. <br /> <br /> <strong>ಸಂಕ್ಷಿಪ್ತ ಸ್ಕೋರ್: </strong>ಪಶ್ಚಿಮ ವಲಯ: 50 ಓವರ್ಗಳಲ್ಲಿ 4 ವಿಕೆಟ್ಗೆ 355 (ಪಾರ್ಥಿವ್ ಪಟೇಲ್ 78, ಅಜಿಂಕ್ಯ ರಹಾನೆ 118, ಚೇತೇಶ್ವರ ಪೂಜಾರ 71, ಕೇದಾರ್ ಜಾಧವ್ ಅಜೇಯ 67, ಪ್ರದೀಪ್ ಸಂಗ್ವಾನ್ 63ಕ್ಕೆ 2, ಬಿಪುಲ್ ಶರ್ಮ 49ಕ್ಕೆ 1, ಹರಭಜನ್ ಸಿಂಗ್ 56ಕ್ಕೆ 1). ಉತ್ತರ ವಲಯ: 42.2 ಓವರ್ಗಳಲ್ಲಿ 242 (ಮನ್ದೀಪ್ ಸಿಂಗ್ 46, ಬಿಪುಲ್ ಶರ್ಮಾ 68, ಹರಭಜನ್ ಸಿಂಗ್ 30, ಮನ್ಪ್ರೀತ್ ಗೋನಿ 28, ರಿಶಿ ಧವನ್ ಔಟಾಗದೆ 25, ಮುನಾಫ್ ಪಟೇಲ್ 34ಕ್ಕೆ 4, ಇಕ್ಬಾಲ್ ಅಬ್ದುಲ್ಲಾ 68ಕ್ಕೆ 4). ಫಲಿತಾಂಶ: ಪಶ್ಚಿಮ ವಲಯಕ್ಕೆ 113 ರನ್ ಗೆಲುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>