<p>ಸಿಡ್ನಿ (ಪಿಟಿಐ): ಕೇವಲ ಎರಡುವರೆ ದಿನಗಳಲ್ಲಿ ಅಂತ್ಯ ಕಂಡ ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಸೋಲು ಅನುಭವಿಸಿದ್ದಕ್ಕೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಬ್ಯಾಟ್ಸ್ಮನ್ಗಳ ವಿರುದ್ಧ `ಗರಂ~ ಆಗಿದ್ದಾರೆ.<br /> <br /> `ಆಸೀಸ್ ಎದುರು 0-3ರಲ್ಲಿ ಸೋಲು ಕಾಣಲು ಸತತ ಬ್ಯಾಟ್ಸ್ಮನ್ಗಳ ವೈಫಲ್ಯ ಹಾಗೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ವಿಫಲರಾಗುತ್ತಿರುವುದು ಪ್ರಮುಖ ಕಾರಣ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂದು ಬೇಗನೇ ಬಂದರೂ, ಸಕಾರಾತ್ಮಕ ಫಲಿತಾಂಶ ನೀಡಲು ಸಾಧ್ಯವಾಗುತ್ತಿಲ್ಲ~ ಎನ್ನುವುದು ದೋನಿ ವಿಶ್ಲೇಷಣೆ.<br /> <br /> `ಈ ಸರಣಿಯ ಯಾವ ಪಂದ್ಯದಲ್ಲೂ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಇದೊಂದು ಕಠಿಣ ಸರಣಿ ಎನ್ನುವುದು ಗೊತ್ತಿದ್ದರೂ, ಅದೇ ತಪ್ಪುಗಳನ್ನು ಮಾಡಿದೆವು. ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ, ಬ್ಯಾಟಿಂಗ್ ನೆಲಕಚ್ಚಿತು ಎಂದು ನಿರಾಸೆ ವ್ಯಕ್ತಪಡಿಸಿದ ಮಹಿ, ನಾಲ್ಕನೇ ಟೆಸ್ಟ್ನಲ್ಲಿ ಈ ಪ್ರಮಾದ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ~ ಎಂದು ಪಂದ್ಯದ ನಂತರ ಹೇಳಿದರು.<br /> <br /> `ಹಿಂದಿನ ಎರಡು ಸರಣಿಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಬಂದಿದ್ದೇನೆ. ತಂಡದ ಸ್ಥಿತಿಗೆ ಬೇಗನೆ ಹೊಂದಿಕೊಳ್ಳುವಲ್ಲಿ ತಂಡ ವಿಫಲವಾಗಿದೆ. ವಿದೇಶದಲ್ಲಿನ ಪಿಚ್ಗೆ ಹಾಗೂ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಬೇಕು. ಇಲ್ಲವಾದರೆ, ಈ ತರಹದ ಸರಣಿ ಸೋಲು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದೇಶಕ್ಕೆ ಬಂದ ಆರಂಭದ ದಿನಗಳಲ್ಲಿ ಈ ಕೆಲಸವನ್ನು ಮಾಡಬೇಕು~ ಎಂದು ಹೇಳಿದರು.<br /> <br /> `ವಿದೇಶದ ಪಿಚ್ಗಳು ವೇಗದ ಬೌಲರ್ಗಳಿಗೆ ನೆರವು ನೀಡುತ್ತದೆ ಎನ್ನುವ ಕಾರಣದಿಂದ ಆ ವಿಭಾಗಕ್ಕೆ ಒತ್ತು ನೀಡಿದೆವು. ನಮ್ಮ ಈ ತೀರ್ಮಾನ ಸರಿಯಾಗಿತ್ತು. ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರ ಕಳಪೆ ಪ್ರದರ್ಶನದಿಂದ ಬ್ಯಾಟಿಂಗ್ ಕೊರತೆ ಎದುರಿಸಬೇಕಾಯಿತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಅನುಭವಿ ಈ ಹಿರಿಯ ಬ್ಯಾಟ್ಸ್ಮನ್ಗಳು ಹಿಂದಿನ ಪಂದ್ಯದಲ್ಲೂ ಅಷ್ಟೇನೂ ಗಮನಾರ್ಹವಲ್ಲದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲೂ ಅದನ್ನೇ ಪುನರಾವರ್ತಿಸಿದರು. ಆದ್ದರಿಂದ ಮೇಲಿಂದ ಮೇಲೆ `ಪೆಟ್ಟು~ ಬೀಳುತ್ತಿದೆ. ಮುಂದಿನ ಪಂದ್ಯದಲ್ಲಿ ತಕ್ಕ ತಿರುಗೇಟು ನೀಡುತ್ತೇವೆ ಎನ್ನುವುದು `ಮಹಿ~ ವಿಶ್ವಾಸ.<br /> <br /> `ಈ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ (75) ಸಾಕಷ್ಟು ಒತ್ತಡದ ನಡುವೆಯೂ, ಉತ್ತಮ ಬ್ಯಾಟಿಂಗ್ ಮಾಡಿದರು. ನಾನು ಈ ತರಹದ ಆಟವನ್ನು ನಿರೀಕ್ಷೆ ಮಾಡುತ್ತೇನೆ. ಒತ್ತಡದಲ್ಲೂ ಚೆನ್ನಾಗಿ ಆಡಬೇಕು. ಇದೊಂದು ಸಕಾರಾತ್ಮಕ ಬೆಳವಣಿಗೆ~ ಎಂದು ದೋನಿ ನುಡಿದರು.</p>.<p><strong>ಮುಖ್ಯಾಂಶಗಳು: </strong></p>.<p>-ವಿದೇಶಿ ನೆಲದಲ್ಲಿ ಭಾರತ ಕಂಡ ಸತತ ಏಳನೇ ಸೋಲು.<br /> - ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಪಡೆದದ್ದು ಇದು ಮೊದಲ ಸಲ.<br /> <br /> -ಟೆಸ್ಟ್ ಕ್ರಿಕೆಟ್ನಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ (75) ವಿರಾಟ್ ಕೊಹ್ಲಿ. <br /> <br /> -ಕ್ರೀಡಾಂಗಣದಲ್ಲಿ ಮೊದಲ ಸಲ `ಪಂದ್ಯ ಶ್ರೇಷ್ಠ~ ಗೌರವ ಪಡೆದ ಡೇವಿಡ್ ವಾರ್ನರ್<br /> -54 ಸಲ ಬೌಲ್ಡ್ ಆಗುವ ಮೂಲಕ ರಾಹುಲ್ ದ್ರಾವಿಡ್ `ವಿಶ್ವ ದಾಖಲೆ~. ಈ ಮೊದಲು ಆ್ಯಲನ್ ಬಾರ್ಡರ್ (53) ಈ ದಾಖಲೆ ಹೊಂದಿದ್ದರು.<br /> <br /> -ದೋನಿ ನಾಯಕತ್ವದಲ್ಲಿ 10ನೇ ಸೋಲು ಕಂಡ ಭಾರತ. ಇದರಿಂದ 10 ಹಾಗೂ ಅದಕ್ಕಿಂತಲೂ ಹೆಚ್ಚು ಟೆಸ್ಟ್ಗಳಲ್ಲಿ ಸೋಲು ಕಂಡ ನಾಯಕರ ಗುಂಪಿಗೆ `ಮಹಿ~ ಸೇರ್ಪಡೆಯಾದರು. ಮನ್ಸೂರ್ ಅಲಿಖಾನ್ ಪಟೌಡಿ (19), ಮೊಹಮ್ಮದ್ ಅಜರುದ್ದೀನ್ (14), ಸೌರವ್ ಗಂಗೂಲಿ (13) ಹಾಗೂ ಬಿಷನ್ ಸಿಂಗ್ ಬೇಡಿ (11) ಈ ಗುಂಪಿನಲ್ಲಿದ್ದಾರೆ.<br /> <br /> -ದೋನಿ ನಾಯಕತ್ವದಲ್ಲಿ ಭಾರತ ಗರಿಷ್ಠ (6 ಸಲ) ಇನಿಂಗ್ಸ್ ಸೋಲು ಅನುಭವಿಸಿತು. ಈ ಮೊದಲು ಲಾಲಾ ಅಮರನಾಥ್ ನಾಯಕತ್ವದಲ್ಲಿ 5 ಸಲ ಇನಿಂಗ್ಸ್ ಸೋಲು ಕಂಡಿತ್ತು.<br /> <br /> -ಪರ್ತ್ನ ಕ್ರೀಡಾಂಗಣದಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ಭಾರತ 200 ಕ್ಕಿಂತ ಕಡಿಮೆ ಮೊತ್ತಕ್ಕೆ ಅಲೌಟ್ ಆದದ್ದು ಇದೇ ಮೊದಲು.<br /> <br /> -ಜಹೀರ್ ಖಾನ್ ರನ್ ಖಾತೆ ತೆರೆಯದೇ ಗರಿಷ್ಠ (24 ಸಲ) `ಸೊನ್ನೆ~ ಸುತ್ತಿದ ಭಾರತದ ಮೊದಲ ಬ್ಯಾಟ್ಸ್ಮನ್. ಈ ಮೊದಲು ಬಿ. ಚಂದ್ರಶೇಖರ್ (23) ದಾಖಲೆ ಹೊಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಡ್ನಿ (ಪಿಟಿಐ): ಕೇವಲ ಎರಡುವರೆ ದಿನಗಳಲ್ಲಿ ಅಂತ್ಯ ಕಂಡ ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಸೋಲು ಅನುಭವಿಸಿದ್ದಕ್ಕೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಬ್ಯಾಟ್ಸ್ಮನ್ಗಳ ವಿರುದ್ಧ `ಗರಂ~ ಆಗಿದ್ದಾರೆ.<br /> <br /> `ಆಸೀಸ್ ಎದುರು 0-3ರಲ್ಲಿ ಸೋಲು ಕಾಣಲು ಸತತ ಬ್ಯಾಟ್ಸ್ಮನ್ಗಳ ವೈಫಲ್ಯ ಹಾಗೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ವಿಫಲರಾಗುತ್ತಿರುವುದು ಪ್ರಮುಖ ಕಾರಣ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂದು ಬೇಗನೇ ಬಂದರೂ, ಸಕಾರಾತ್ಮಕ ಫಲಿತಾಂಶ ನೀಡಲು ಸಾಧ್ಯವಾಗುತ್ತಿಲ್ಲ~ ಎನ್ನುವುದು ದೋನಿ ವಿಶ್ಲೇಷಣೆ.<br /> <br /> `ಈ ಸರಣಿಯ ಯಾವ ಪಂದ್ಯದಲ್ಲೂ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಇದೊಂದು ಕಠಿಣ ಸರಣಿ ಎನ್ನುವುದು ಗೊತ್ತಿದ್ದರೂ, ಅದೇ ತಪ್ಪುಗಳನ್ನು ಮಾಡಿದೆವು. ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ, ಬ್ಯಾಟಿಂಗ್ ನೆಲಕಚ್ಚಿತು ಎಂದು ನಿರಾಸೆ ವ್ಯಕ್ತಪಡಿಸಿದ ಮಹಿ, ನಾಲ್ಕನೇ ಟೆಸ್ಟ್ನಲ್ಲಿ ಈ ಪ್ರಮಾದ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ~ ಎಂದು ಪಂದ್ಯದ ನಂತರ ಹೇಳಿದರು.<br /> <br /> `ಹಿಂದಿನ ಎರಡು ಸರಣಿಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಬಂದಿದ್ದೇನೆ. ತಂಡದ ಸ್ಥಿತಿಗೆ ಬೇಗನೆ ಹೊಂದಿಕೊಳ್ಳುವಲ್ಲಿ ತಂಡ ವಿಫಲವಾಗಿದೆ. ವಿದೇಶದಲ್ಲಿನ ಪಿಚ್ಗೆ ಹಾಗೂ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಬೇಕು. ಇಲ್ಲವಾದರೆ, ಈ ತರಹದ ಸರಣಿ ಸೋಲು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದೇಶಕ್ಕೆ ಬಂದ ಆರಂಭದ ದಿನಗಳಲ್ಲಿ ಈ ಕೆಲಸವನ್ನು ಮಾಡಬೇಕು~ ಎಂದು ಹೇಳಿದರು.<br /> <br /> `ವಿದೇಶದ ಪಿಚ್ಗಳು ವೇಗದ ಬೌಲರ್ಗಳಿಗೆ ನೆರವು ನೀಡುತ್ತದೆ ಎನ್ನುವ ಕಾರಣದಿಂದ ಆ ವಿಭಾಗಕ್ಕೆ ಒತ್ತು ನೀಡಿದೆವು. ನಮ್ಮ ಈ ತೀರ್ಮಾನ ಸರಿಯಾಗಿತ್ತು. ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರ ಕಳಪೆ ಪ್ರದರ್ಶನದಿಂದ ಬ್ಯಾಟಿಂಗ್ ಕೊರತೆ ಎದುರಿಸಬೇಕಾಯಿತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಅನುಭವಿ ಈ ಹಿರಿಯ ಬ್ಯಾಟ್ಸ್ಮನ್ಗಳು ಹಿಂದಿನ ಪಂದ್ಯದಲ್ಲೂ ಅಷ್ಟೇನೂ ಗಮನಾರ್ಹವಲ್ಲದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲೂ ಅದನ್ನೇ ಪುನರಾವರ್ತಿಸಿದರು. ಆದ್ದರಿಂದ ಮೇಲಿಂದ ಮೇಲೆ `ಪೆಟ್ಟು~ ಬೀಳುತ್ತಿದೆ. ಮುಂದಿನ ಪಂದ್ಯದಲ್ಲಿ ತಕ್ಕ ತಿರುಗೇಟು ನೀಡುತ್ತೇವೆ ಎನ್ನುವುದು `ಮಹಿ~ ವಿಶ್ವಾಸ.<br /> <br /> `ಈ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ (75) ಸಾಕಷ್ಟು ಒತ್ತಡದ ನಡುವೆಯೂ, ಉತ್ತಮ ಬ್ಯಾಟಿಂಗ್ ಮಾಡಿದರು. ನಾನು ಈ ತರಹದ ಆಟವನ್ನು ನಿರೀಕ್ಷೆ ಮಾಡುತ್ತೇನೆ. ಒತ್ತಡದಲ್ಲೂ ಚೆನ್ನಾಗಿ ಆಡಬೇಕು. ಇದೊಂದು ಸಕಾರಾತ್ಮಕ ಬೆಳವಣಿಗೆ~ ಎಂದು ದೋನಿ ನುಡಿದರು.</p>.<p><strong>ಮುಖ್ಯಾಂಶಗಳು: </strong></p>.<p>-ವಿದೇಶಿ ನೆಲದಲ್ಲಿ ಭಾರತ ಕಂಡ ಸತತ ಏಳನೇ ಸೋಲು.<br /> - ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಪಡೆದದ್ದು ಇದು ಮೊದಲ ಸಲ.<br /> <br /> -ಟೆಸ್ಟ್ ಕ್ರಿಕೆಟ್ನಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ (75) ವಿರಾಟ್ ಕೊಹ್ಲಿ. <br /> <br /> -ಕ್ರೀಡಾಂಗಣದಲ್ಲಿ ಮೊದಲ ಸಲ `ಪಂದ್ಯ ಶ್ರೇಷ್ಠ~ ಗೌರವ ಪಡೆದ ಡೇವಿಡ್ ವಾರ್ನರ್<br /> -54 ಸಲ ಬೌಲ್ಡ್ ಆಗುವ ಮೂಲಕ ರಾಹುಲ್ ದ್ರಾವಿಡ್ `ವಿಶ್ವ ದಾಖಲೆ~. ಈ ಮೊದಲು ಆ್ಯಲನ್ ಬಾರ್ಡರ್ (53) ಈ ದಾಖಲೆ ಹೊಂದಿದ್ದರು.<br /> <br /> -ದೋನಿ ನಾಯಕತ್ವದಲ್ಲಿ 10ನೇ ಸೋಲು ಕಂಡ ಭಾರತ. ಇದರಿಂದ 10 ಹಾಗೂ ಅದಕ್ಕಿಂತಲೂ ಹೆಚ್ಚು ಟೆಸ್ಟ್ಗಳಲ್ಲಿ ಸೋಲು ಕಂಡ ನಾಯಕರ ಗುಂಪಿಗೆ `ಮಹಿ~ ಸೇರ್ಪಡೆಯಾದರು. ಮನ್ಸೂರ್ ಅಲಿಖಾನ್ ಪಟೌಡಿ (19), ಮೊಹಮ್ಮದ್ ಅಜರುದ್ದೀನ್ (14), ಸೌರವ್ ಗಂಗೂಲಿ (13) ಹಾಗೂ ಬಿಷನ್ ಸಿಂಗ್ ಬೇಡಿ (11) ಈ ಗುಂಪಿನಲ್ಲಿದ್ದಾರೆ.<br /> <br /> -ದೋನಿ ನಾಯಕತ್ವದಲ್ಲಿ ಭಾರತ ಗರಿಷ್ಠ (6 ಸಲ) ಇನಿಂಗ್ಸ್ ಸೋಲು ಅನುಭವಿಸಿತು. ಈ ಮೊದಲು ಲಾಲಾ ಅಮರನಾಥ್ ನಾಯಕತ್ವದಲ್ಲಿ 5 ಸಲ ಇನಿಂಗ್ಸ್ ಸೋಲು ಕಂಡಿತ್ತು.<br /> <br /> -ಪರ್ತ್ನ ಕ್ರೀಡಾಂಗಣದಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ಭಾರತ 200 ಕ್ಕಿಂತ ಕಡಿಮೆ ಮೊತ್ತಕ್ಕೆ ಅಲೌಟ್ ಆದದ್ದು ಇದೇ ಮೊದಲು.<br /> <br /> -ಜಹೀರ್ ಖಾನ್ ರನ್ ಖಾತೆ ತೆರೆಯದೇ ಗರಿಷ್ಠ (24 ಸಲ) `ಸೊನ್ನೆ~ ಸುತ್ತಿದ ಭಾರತದ ಮೊದಲ ಬ್ಯಾಟ್ಸ್ಮನ್. ಈ ಮೊದಲು ಬಿ. ಚಂದ್ರಶೇಖರ್ (23) ದಾಖಲೆ ಹೊಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>