<p><strong>ಕಾರ್ಡಿಫ್: </strong>ಇತ್ತೀಚಿನ ದಿನಗಳಲ್ಲಿ ಭಾರತ ಹಲವು ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದೆ. ಆದರೂ ಗುರುವಾರ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ನಲ್ಲಿ ಲಂಕಾ ತಂಡವನ್ನು ಹಗುರವಾಗಿ ಕಾಣಲು ಭಾರತ ಸಿದ್ಧವಿಲ್ಲ.<br /> <br /> ಯಾವುದೇ ಕ್ಷಣದಲ್ಲೂ ಪುಟಿದೆದ್ದು ನಿಲ್ಲುವ ಸಾಮರ್ಥ್ಯವನ್ನು ಲಂಕಾ ಹೊಂದಿದೆ ಎಂಬುದನ್ನು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅರಿತಿದ್ದಾರೆ. `ಲಂಕಾ ಅಪಾಯಕಾರಿ ತಂಡ' ಎಂದು ದೋನಿ ಬುಧವಾರ ಅಭ್ಯಾಸದ ಬಳಿಕ ತಿಳಿಸಿದರು.<br /> <br /> `ಲಂಕಾ ತುಂಬಾ ಅಪಾಯಕಾರಿ ತಂಡ. ನಮ್ಮ ಗಮನ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಮೇಲೆ ಮಾತ್ರ ಸೀಮಿತವಾಗಿಲ್ಲ. ಎದುರಾಳಿ ತಂಡದ ಎಲ್ಲ ಆಟಗಾರರ ಮೇಲೆ ಗಮನ ಇಡುವುದು ಅಗತ್ಯ' ಎಂದು ಹೇಳಿದರು.<br /> <br /> ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲೆ ಇಲ್ಲ ಎಂದು ದೋನಿ ಇದೇ ವೇಳೆ ಸ್ಪಷ್ಟಪಡಿಸಿದರು. `ಐಪಿಎಲ್ ಹಾಗೂ ಬಿಸಿಸಿಐಗೆ ಸಂಬಂಧಿಸಿದ ವಿವಾದದ ಕಹಿ ಮರೆಯಲು ಭಾರತ ಕಪ್ ಗೆಲ್ಲಬೇಕು' ಎಂಬುದು ಮಾಧ್ಯಮಗಳು ಮಾಡುತ್ತಿರುವ `ತಪ್ಪು ಪ್ರಚಾರ' ಎಂದಿದ್ದಾರೆ.<br /> <br /> `ಭಾರತದ ಮಾಧ್ಯಮಗಳು ಈ ರೀತಿಯ ತಪ್ಪು ಪ್ರಚಾರ ಮಾಡುತ್ತಿವೆ. ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಮುಂದಿರುವ ಗುರಿ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> ಅಪಾಯಕಾರಿ ಬೌಲರ್ ಲಸಿತ್ ಮಾಲಿಂಗ ಬಗ್ಗೆ ಹೆದರಿಕೆ ಇಲ್ಲ ಎಂದಿರುವ ದೋನಿ, `ಐಪಿಎಲ್ನಲ್ಲಿ ನಾವು ಹಲವು ಸಲ ಅವರನ್ನು ಎದುರಿಸಿದ್ದೇವೆ. ಉಪ ಭೂಖಂಡದ ಪಿಚ್ಗಳಲ್ಲಿ ಮಾಲಿಂಗ ಉತ್ತಮ ರೀತಿಯಲ್ಲಿ ರಿವರ್ಸ್ ಸ್ವಿಂಗ್ ಎಸೆತಗಳನ್ನು ಹಾಕುವರು. ಆದರೂ ಅವರನ್ನು ಸಮರ್ಥವಾಗಿ ಎದುರಿಸಿದ್ದೇವೆ. ಏನೇ ಆಗಲಿ, ಅವರೊಬ್ಬ ಅಪಾಯಕಾರಿ ಬೌಲರ್ ಹೌದು' ಎಂದು ರಾಂಚಿಯ ಬ್ಯಾಟ್ಸ್ಮನ್ ಹೇಳಿದರು. <br /> <br /> ಇಂಗ್ಲೆಂಡ್ನ ನೆಲದಲ್ಲಿ ಉಭಯ ತಂಡಗಳು ಒಟ್ಟ ನಾಲ್ಕು ಸಲ ಎದುರಾಗಿವೆ. 1979ರ ವಿಶ್ವಕಪ್ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಭಾರತ ಗೆಲುವಿನ ನಗು ಬೀರಿದೆ.<br /> <br /> <strong>ಮಳೆ ಭೀತಿ: </strong>ಕಾರ್ಡಿಫ್ನಲ್ಲಿ ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ. ಪಂದ್ಯ ರದ್ದುಕೊಂಡರೆ, ಭಾರತ ಫೈನಲ್ಗೆ ಮುನ್ನಡೆಯಲಿದೆ. ಏಕೆಂದರೆ ಮಹಿ ಬಳಗ `ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ಗೆ ಮುನ್ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಡಿಫ್: </strong>ಇತ್ತೀಚಿನ ದಿನಗಳಲ್ಲಿ ಭಾರತ ಹಲವು ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದೆ. ಆದರೂ ಗುರುವಾರ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ನಲ್ಲಿ ಲಂಕಾ ತಂಡವನ್ನು ಹಗುರವಾಗಿ ಕಾಣಲು ಭಾರತ ಸಿದ್ಧವಿಲ್ಲ.<br /> <br /> ಯಾವುದೇ ಕ್ಷಣದಲ್ಲೂ ಪುಟಿದೆದ್ದು ನಿಲ್ಲುವ ಸಾಮರ್ಥ್ಯವನ್ನು ಲಂಕಾ ಹೊಂದಿದೆ ಎಂಬುದನ್ನು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅರಿತಿದ್ದಾರೆ. `ಲಂಕಾ ಅಪಾಯಕಾರಿ ತಂಡ' ಎಂದು ದೋನಿ ಬುಧವಾರ ಅಭ್ಯಾಸದ ಬಳಿಕ ತಿಳಿಸಿದರು.<br /> <br /> `ಲಂಕಾ ತುಂಬಾ ಅಪಾಯಕಾರಿ ತಂಡ. ನಮ್ಮ ಗಮನ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಮೇಲೆ ಮಾತ್ರ ಸೀಮಿತವಾಗಿಲ್ಲ. ಎದುರಾಳಿ ತಂಡದ ಎಲ್ಲ ಆಟಗಾರರ ಮೇಲೆ ಗಮನ ಇಡುವುದು ಅಗತ್ಯ' ಎಂದು ಹೇಳಿದರು.<br /> <br /> ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲೆ ಇಲ್ಲ ಎಂದು ದೋನಿ ಇದೇ ವೇಳೆ ಸ್ಪಷ್ಟಪಡಿಸಿದರು. `ಐಪಿಎಲ್ ಹಾಗೂ ಬಿಸಿಸಿಐಗೆ ಸಂಬಂಧಿಸಿದ ವಿವಾದದ ಕಹಿ ಮರೆಯಲು ಭಾರತ ಕಪ್ ಗೆಲ್ಲಬೇಕು' ಎಂಬುದು ಮಾಧ್ಯಮಗಳು ಮಾಡುತ್ತಿರುವ `ತಪ್ಪು ಪ್ರಚಾರ' ಎಂದಿದ್ದಾರೆ.<br /> <br /> `ಭಾರತದ ಮಾಧ್ಯಮಗಳು ಈ ರೀತಿಯ ತಪ್ಪು ಪ್ರಚಾರ ಮಾಡುತ್ತಿವೆ. ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಮುಂದಿರುವ ಗುರಿ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> ಅಪಾಯಕಾರಿ ಬೌಲರ್ ಲಸಿತ್ ಮಾಲಿಂಗ ಬಗ್ಗೆ ಹೆದರಿಕೆ ಇಲ್ಲ ಎಂದಿರುವ ದೋನಿ, `ಐಪಿಎಲ್ನಲ್ಲಿ ನಾವು ಹಲವು ಸಲ ಅವರನ್ನು ಎದುರಿಸಿದ್ದೇವೆ. ಉಪ ಭೂಖಂಡದ ಪಿಚ್ಗಳಲ್ಲಿ ಮಾಲಿಂಗ ಉತ್ತಮ ರೀತಿಯಲ್ಲಿ ರಿವರ್ಸ್ ಸ್ವಿಂಗ್ ಎಸೆತಗಳನ್ನು ಹಾಕುವರು. ಆದರೂ ಅವರನ್ನು ಸಮರ್ಥವಾಗಿ ಎದುರಿಸಿದ್ದೇವೆ. ಏನೇ ಆಗಲಿ, ಅವರೊಬ್ಬ ಅಪಾಯಕಾರಿ ಬೌಲರ್ ಹೌದು' ಎಂದು ರಾಂಚಿಯ ಬ್ಯಾಟ್ಸ್ಮನ್ ಹೇಳಿದರು. <br /> <br /> ಇಂಗ್ಲೆಂಡ್ನ ನೆಲದಲ್ಲಿ ಉಭಯ ತಂಡಗಳು ಒಟ್ಟ ನಾಲ್ಕು ಸಲ ಎದುರಾಗಿವೆ. 1979ರ ವಿಶ್ವಕಪ್ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಭಾರತ ಗೆಲುವಿನ ನಗು ಬೀರಿದೆ.<br /> <br /> <strong>ಮಳೆ ಭೀತಿ: </strong>ಕಾರ್ಡಿಫ್ನಲ್ಲಿ ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ. ಪಂದ್ಯ ರದ್ದುಕೊಂಡರೆ, ಭಾರತ ಫೈನಲ್ಗೆ ಮುನ್ನಡೆಯಲಿದೆ. ಏಕೆಂದರೆ ಮಹಿ ಬಳಗ `ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ಗೆ ಮುನ್ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>