<p><strong>ಮುಂಬೈ (ಪಿಟಿಐ): </strong>ಎರಡೂ ತಂಡಗಳಿಗೆ ತಲಾ 25 ಓವರ್ಗಳಂತೆ ನಾಲ್ಕು ಇನಿಂಗ್ಸ್ಗಳನ್ನು ಆಡಿಸುವುದು ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವ ಸಚಿನ್ ತೆಂಡೂಲ್ಕರ್ ಅವರ ಸಲಹೆಗೆ ರಾಹುಲ್ ದ್ರಾವಿಡ್ ಹಾಗೂ ಲಸಿತ್ ಮಾಲಿಂಗ ಧ್ವನಿಗೂಡಿಸಿದ್ದಾರೆ.<br /> <br /> `ಇದೊಂದು ಆಸಕ್ತಿದಾಯಕ ಸಲಹೆ. ಈ ಸಲಹೆಯನ್ನು ಏಕೆ ಐಸಿಸಿ ತಿರಸ್ಕರಿಸಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಇದೊಂದು ಒಳ್ಳೆಯ ಯೋಜನೆ. ಇದೊಂದೊ ಹೊಸ ಪ್ರಯೋಗ ಆಗುತಿತ್ತು~ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದ್ರಾವಿಡ್ ನುಡಿದಿದ್ದಾರೆ.<br /> <br /> `ಈಗಾಗಲೇ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್ನಲ್ಲಿ ಈ ಪ್ರಯೋಗ ನಡೆದಿದೆ. ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳತ್ತ ಕಣ್ಣು ಹರಿಸಬೇಕಿತ್ತು~ ಎಂದಿದ್ದಾರೆ.<br /> <br /> ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಬದಲಾವಣೆ ಸಂಬಂಧ ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೂನ್ ಲಾರ್ಗಟ್ಗೆ ಪತ್ರ ಬರೆದ್ದ್ದಿದರು. ಆದರೆ ಐಸಿಸಿ ಅದನ್ನು ತಿರಸ್ಕರಿಸಿದೆ. <br /> <br /> `ಸಚಿನ್ ನೀಡಿರುವ ಸಲಹೆಗೆ ನನ್ನ ಬೆಂಬಲವಿದೆ. ಅವರ ಹೊಸ ಸಲಹೆ ಬೌಲರ್ಗಳಿಗೂ ನೆರವು ನೀಡಲಿದೆ. ಈಗಿರುವ 50 ಓವರ್ ಮಾದರಿ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವಂತಿದೆ~ ಎಂದು ಶ್ರೀಲಂಕಾ ತಂಡದ ವೇಗಿ ಮಾಲಿಂಗ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಎರಡೂ ತಂಡಗಳಿಗೆ ತಲಾ 25 ಓವರ್ಗಳಂತೆ ನಾಲ್ಕು ಇನಿಂಗ್ಸ್ಗಳನ್ನು ಆಡಿಸುವುದು ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವ ಸಚಿನ್ ತೆಂಡೂಲ್ಕರ್ ಅವರ ಸಲಹೆಗೆ ರಾಹುಲ್ ದ್ರಾವಿಡ್ ಹಾಗೂ ಲಸಿತ್ ಮಾಲಿಂಗ ಧ್ವನಿಗೂಡಿಸಿದ್ದಾರೆ.<br /> <br /> `ಇದೊಂದು ಆಸಕ್ತಿದಾಯಕ ಸಲಹೆ. ಈ ಸಲಹೆಯನ್ನು ಏಕೆ ಐಸಿಸಿ ತಿರಸ್ಕರಿಸಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಇದೊಂದು ಒಳ್ಳೆಯ ಯೋಜನೆ. ಇದೊಂದೊ ಹೊಸ ಪ್ರಯೋಗ ಆಗುತಿತ್ತು~ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದ್ರಾವಿಡ್ ನುಡಿದಿದ್ದಾರೆ.<br /> <br /> `ಈಗಾಗಲೇ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್ನಲ್ಲಿ ಈ ಪ್ರಯೋಗ ನಡೆದಿದೆ. ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳತ್ತ ಕಣ್ಣು ಹರಿಸಬೇಕಿತ್ತು~ ಎಂದಿದ್ದಾರೆ.<br /> <br /> ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಬದಲಾವಣೆ ಸಂಬಂಧ ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೂನ್ ಲಾರ್ಗಟ್ಗೆ ಪತ್ರ ಬರೆದ್ದ್ದಿದರು. ಆದರೆ ಐಸಿಸಿ ಅದನ್ನು ತಿರಸ್ಕರಿಸಿದೆ. <br /> <br /> `ಸಚಿನ್ ನೀಡಿರುವ ಸಲಹೆಗೆ ನನ್ನ ಬೆಂಬಲವಿದೆ. ಅವರ ಹೊಸ ಸಲಹೆ ಬೌಲರ್ಗಳಿಗೂ ನೆರವು ನೀಡಲಿದೆ. ಈಗಿರುವ 50 ಓವರ್ ಮಾದರಿ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವಂತಿದೆ~ ಎಂದು ಶ್ರೀಲಂಕಾ ತಂಡದ ವೇಗಿ ಮಾಲಿಂಗ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>