<p><strong>ಕೊಲಂಬೊ (ಪಿಟಿಐ/ಐಎಎನ್ಎಸ್</strong>): ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ `ಐಸಿಸಿ ಚಾಂಪಿಯನ್ಸ್ ಟ್ರೋಫಿ'ಯ ಉದ್ಘಾಟನಾ ಸಮಾರಂಭದ ವೇಳೆ ಶ್ರೀಲಂಕಾ ರಾಷ್ಟ್ರಗೀತೆಯ ಬದಲಾಗಿ ಹಿಂದಿ ಗೀತೆ ನುಡಿಸಿದಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕ್ಷಮೆಯಾಚಿಸಿದೆ.<br /> <br /> ಉದ್ಘಾಟನಾ ಸಮಾರಂಭದಲ್ಲಿ ನಡೆದ ಅಚಾತುರ್ಯವನ್ನು ಖಂಡಿಸಿ, ಇಲ್ಲಿನ `ರಾವಣ ಬಲ' ಸಂಘಟನೆಯ ಕಾರ್ಯಕರ್ತರು, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.<br /> <br /> `ಇದು ದೇಶಕ್ಕೆ ಮಾಡಿದ ನಂಬಿಕೆ ನಂಬಿಕೆದ್ರೋಹ. ರಾಷ್ಟ್ರ ಗೀತೆಯ ಬದಲಾಗಿ ಹಿಂದಿ ಗೀತೆ ಏಕೆ ನುಡಿಸಲಾಯಿತು ಎಂಬುದನ್ನು ಎಸ್ಎಲ್ಸಿ ವಿವರಣೆ ನೀಡಲೇಬೇಕು' ಎಂದು ಆಗ್ರಹಿಸಿದ್ದಾರೆ.<br /> <br /> ಘಟನೆಗೆ ಸಂಬಂಧಿಸಿದಂತೆ ಐಸಿಸಿ, ಶ್ರೀಲಂಕಾದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ಪತ್ರವೊಂದನ್ನು ನೀಡಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.<br /> <br /> `ಸಮಾರಂಭದಲ್ಲಿ ಹಾಜರಿದ್ದ ಲಂಕಾ ಕ್ರಿಕೆಟ್ನ ಅಧಿಕಾರಿಗಳು ಯಾವುದೇ ಅಧಿಕೃತ ಪ್ರತಿರೋಧ ತೋರಿಲ್ಲ' ಎಂದೂ ರಾವಣ ಬಲ ಸಂಘಟನೆಯು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.<br /> <br /> ಆದರೆ, `ಈ ಘಟನೆಗೆ ಸಂಬಂಧಿಸಿದಂತೆ ಐಸಿಸಿ ಕ್ಷಮೆಯಾಚಿಸಿದೆ' ಎಂದು ಸಮಜಾಯಿಷಿ ನೀಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆ ನೀಡಿದೆ.<br /> <br /> <strong>ಅಚಾತುರ್ಯ</strong>: ಜೂನ್ ಆರರಂದು ಕಾರ್ಡಿಫ್ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀಲಂಕಾ ಆಟಗಾರರ ಪಥಸಂಚಲನದ ವೇಳೆ ಅವರ ರಾಷ್ಟ್ರಗೀತೆಯ ಬದಲು ಹಿಂದಿ ಗೀತೆಯೊಂದನ್ನು ನುಡಿಸಲಾಗಿತ್ತು. ಆದರೆ ಉಳಿದ ತಂಡಗಳಿಗೆ ಅವರವರ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ (ಪಿಟಿಐ/ಐಎಎನ್ಎಸ್</strong>): ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ `ಐಸಿಸಿ ಚಾಂಪಿಯನ್ಸ್ ಟ್ರೋಫಿ'ಯ ಉದ್ಘಾಟನಾ ಸಮಾರಂಭದ ವೇಳೆ ಶ್ರೀಲಂಕಾ ರಾಷ್ಟ್ರಗೀತೆಯ ಬದಲಾಗಿ ಹಿಂದಿ ಗೀತೆ ನುಡಿಸಿದಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕ್ಷಮೆಯಾಚಿಸಿದೆ.<br /> <br /> ಉದ್ಘಾಟನಾ ಸಮಾರಂಭದಲ್ಲಿ ನಡೆದ ಅಚಾತುರ್ಯವನ್ನು ಖಂಡಿಸಿ, ಇಲ್ಲಿನ `ರಾವಣ ಬಲ' ಸಂಘಟನೆಯ ಕಾರ್ಯಕರ್ತರು, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.<br /> <br /> `ಇದು ದೇಶಕ್ಕೆ ಮಾಡಿದ ನಂಬಿಕೆ ನಂಬಿಕೆದ್ರೋಹ. ರಾಷ್ಟ್ರ ಗೀತೆಯ ಬದಲಾಗಿ ಹಿಂದಿ ಗೀತೆ ಏಕೆ ನುಡಿಸಲಾಯಿತು ಎಂಬುದನ್ನು ಎಸ್ಎಲ್ಸಿ ವಿವರಣೆ ನೀಡಲೇಬೇಕು' ಎಂದು ಆಗ್ರಹಿಸಿದ್ದಾರೆ.<br /> <br /> ಘಟನೆಗೆ ಸಂಬಂಧಿಸಿದಂತೆ ಐಸಿಸಿ, ಶ್ರೀಲಂಕಾದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ಪತ್ರವೊಂದನ್ನು ನೀಡಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.<br /> <br /> `ಸಮಾರಂಭದಲ್ಲಿ ಹಾಜರಿದ್ದ ಲಂಕಾ ಕ್ರಿಕೆಟ್ನ ಅಧಿಕಾರಿಗಳು ಯಾವುದೇ ಅಧಿಕೃತ ಪ್ರತಿರೋಧ ತೋರಿಲ್ಲ' ಎಂದೂ ರಾವಣ ಬಲ ಸಂಘಟನೆಯು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.<br /> <br /> ಆದರೆ, `ಈ ಘಟನೆಗೆ ಸಂಬಂಧಿಸಿದಂತೆ ಐಸಿಸಿ ಕ್ಷಮೆಯಾಚಿಸಿದೆ' ಎಂದು ಸಮಜಾಯಿಷಿ ನೀಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆ ನೀಡಿದೆ.<br /> <br /> <strong>ಅಚಾತುರ್ಯ</strong>: ಜೂನ್ ಆರರಂದು ಕಾರ್ಡಿಫ್ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀಲಂಕಾ ಆಟಗಾರರ ಪಥಸಂಚಲನದ ವೇಳೆ ಅವರ ರಾಷ್ಟ್ರಗೀತೆಯ ಬದಲು ಹಿಂದಿ ಗೀತೆಯೊಂದನ್ನು ನುಡಿಸಲಾಗಿತ್ತು. ಆದರೆ ಉಳಿದ ತಂಡಗಳಿಗೆ ಅವರವರ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>