<p><strong>ಕೊಲಂಬೊ (ಪಿಟಿಐ):</strong> ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಹೊತ್ತುಕೊಂಡಿದೆ.</p>.<p>‘ಶ್ರೀಲಂಕಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವರು ನಮ್ಮ ಸಂಘಟನೆಯವರೇ’ ಎಂದು ಐಸಿಸ್ ಪ್ರಕಟಣೆ ತಿಳಿಸಿರುವುದಾಗಿ ‘ಅಮಾಖ್’ ಸುದ್ದಿ ಸಂಸ್ಥೆ ಹೇಳಿದೆ.</p>.<p>‘ಅಬು ಉಬಾಯ್ದ, ಅಬು ಅಲ್–ಮುಖ್ತರ್, ಅಬು ಖಲೀಲ್, ಅಬು ಹಮ್ಝಾ, ಅಬು ಅಲ್ ಬರಾ, ಅಬು ಮುಹಮದ್ ಮತ್ತು ಅಬು ಅಬ್ದುಲ್ಲಾ ದಾಳಿ ನಡೆಸಿದ ಏಳು ಆತ್ಮಹತ್ಯಾ ಬಾಂಬರ್ಗಳು’ ಎಂದು ಅದು ಗುರುತಿಸಿದೆ.</p>.<p>ಅಲ್ಲದೆ, ದಾಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅದು ಹೇಳಿಕೊಂಡಿದೆ.</p>.<p>ಪ್ರಕರಣ ಸಂಬಂಧ ಈವರೆಗೆ 40 ಶಂಕಿತರನ್ನು ಬಂಧಿಸಲಾಗಿದೆ. ಅಲ್ಲದೆ, ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.</p>.<p class="Subhead"><strong>ಎನ್ಟಿಜೆ ನಿಷೇಧಕ್ಕೆ ಪ್ರಸ್ತಾವ: ‘</strong>ದಾಳಿ ನಡೆಸಿದ ಎಲ್ಲ ಆತ್ಮಹತ್ಯಾ ಬಾಂಬರ್ಗಳು ಶ್ರೀಲಂಕಾದವರೇ. ಆದರೆ, ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಅವರು ಸಂಪರ್ಕ ಹೊಂದಿದ್ದ ಸಾಧ್ಯತೆ ಇದೆ’ ಎಂದುಶ್ರೀಲಂಕಾದ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಸಂಸತ್ತಿನಲ್ಲಿ ಹೇಳಿದ್ದಾರೆ.</p>.<p>‘ದಾಳಿಯಲ್ಲಿ ನ್ಯಾಷನಲ್ ತೌಫೀಕ್ ಜಮಾತ್ (ಎನ್ಟಿಜೆ) ಉಗ್ರ ಸಂಘಟನೆ ಕೈವಾಡವಿರುವ ಶಂಕೆಯಿದೆ’ ಎಂದ ಅವರು, ಈ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಸಂಸತ್ತಿನ ಮುಂದಿಟ್ಟರು.</p>.<p class="Subhead">ಸಾವಿನ ಸಂಖ್ಯೆ 321ಕ್ಕೆ ಏರಿಕೆ: ಸರಣಿ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 321ಕ್ಕೆ ಏರಿದೆ. ಈ ಪೈಕಿ 10 ಭಾರತೀಯರೂ ಬಲಿಯಾಗಿದ್ದಾರೆ.ಒಟ್ಟು 38 ವಿದೇಶಿಯರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ ರಾಷ್ಟ್ರೀಯ ಶೋಕ ದಿನ ಎಂದು ಘೋಷಿಸಿದ್ದ ಸರ್ಕಾರ, 3 ನಿಮಿಷ ಮೌನಾಚರಣೆ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ (ಪಿಟಿಐ):</strong> ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಹೊತ್ತುಕೊಂಡಿದೆ.</p>.<p>‘ಶ್ರೀಲಂಕಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವರು ನಮ್ಮ ಸಂಘಟನೆಯವರೇ’ ಎಂದು ಐಸಿಸ್ ಪ್ರಕಟಣೆ ತಿಳಿಸಿರುವುದಾಗಿ ‘ಅಮಾಖ್’ ಸುದ್ದಿ ಸಂಸ್ಥೆ ಹೇಳಿದೆ.</p>.<p>‘ಅಬು ಉಬಾಯ್ದ, ಅಬು ಅಲ್–ಮುಖ್ತರ್, ಅಬು ಖಲೀಲ್, ಅಬು ಹಮ್ಝಾ, ಅಬು ಅಲ್ ಬರಾ, ಅಬು ಮುಹಮದ್ ಮತ್ತು ಅಬು ಅಬ್ದುಲ್ಲಾ ದಾಳಿ ನಡೆಸಿದ ಏಳು ಆತ್ಮಹತ್ಯಾ ಬಾಂಬರ್ಗಳು’ ಎಂದು ಅದು ಗುರುತಿಸಿದೆ.</p>.<p>ಅಲ್ಲದೆ, ದಾಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅದು ಹೇಳಿಕೊಂಡಿದೆ.</p>.<p>ಪ್ರಕರಣ ಸಂಬಂಧ ಈವರೆಗೆ 40 ಶಂಕಿತರನ್ನು ಬಂಧಿಸಲಾಗಿದೆ. ಅಲ್ಲದೆ, ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.</p>.<p class="Subhead"><strong>ಎನ್ಟಿಜೆ ನಿಷೇಧಕ್ಕೆ ಪ್ರಸ್ತಾವ: ‘</strong>ದಾಳಿ ನಡೆಸಿದ ಎಲ್ಲ ಆತ್ಮಹತ್ಯಾ ಬಾಂಬರ್ಗಳು ಶ್ರೀಲಂಕಾದವರೇ. ಆದರೆ, ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಅವರು ಸಂಪರ್ಕ ಹೊಂದಿದ್ದ ಸಾಧ್ಯತೆ ಇದೆ’ ಎಂದುಶ್ರೀಲಂಕಾದ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಸಂಸತ್ತಿನಲ್ಲಿ ಹೇಳಿದ್ದಾರೆ.</p>.<p>‘ದಾಳಿಯಲ್ಲಿ ನ್ಯಾಷನಲ್ ತೌಫೀಕ್ ಜಮಾತ್ (ಎನ್ಟಿಜೆ) ಉಗ್ರ ಸಂಘಟನೆ ಕೈವಾಡವಿರುವ ಶಂಕೆಯಿದೆ’ ಎಂದ ಅವರು, ಈ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಸಂಸತ್ತಿನ ಮುಂದಿಟ್ಟರು.</p>.<p class="Subhead">ಸಾವಿನ ಸಂಖ್ಯೆ 321ಕ್ಕೆ ಏರಿಕೆ: ಸರಣಿ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 321ಕ್ಕೆ ಏರಿದೆ. ಈ ಪೈಕಿ 10 ಭಾರತೀಯರೂ ಬಲಿಯಾಗಿದ್ದಾರೆ.ಒಟ್ಟು 38 ವಿದೇಶಿಯರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ ರಾಷ್ಟ್ರೀಯ ಶೋಕ ದಿನ ಎಂದು ಘೋಷಿಸಿದ್ದ ಸರ್ಕಾರ, 3 ನಿಮಿಷ ಮೌನಾಚರಣೆ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>