ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಮಾಜದಲ್ಲಿ ಜಾತೀಯತೆ, ತಾರತಮ್ಯ ಮೂಡಿಸುವ ಮನಸ್ಥಿತಿಗಳೇ ದಾಳಿಯ ಹಿಂದಿವೆ. ಟಿ.ವಿ ಮಾಧ್ಯಮ, ಪಠ್ಯಪುಸ್ತಕದ ಮೂಲಕ ಇಂದಿಗೂ ಅಸಮಾನತೆ ಹಾಗೂ ತಾರತಮ್ಯ ಬಿತ್ತುತ್ತಿರುವ ಫಲವೇ ಈ ದಾಳಿಯಾಗಿದೆ. ಅಂಬೇಡ್ಕರ್ ಅವರು ಯಾವುದೇ ಭಾಷೆ, ಜಾತಿಗೆ ಪ್ರಾಂತ್ಯಕ್ಕೆ ಸೀಮಿತವಲ್ಲ. ಅವರು ವಿಶ್ವಮಾನವರಾಗಿದ್ದು, ಬಡವರು, ದೀನ ದಲಿತರು, ಅಸಂಘಟಿತ ವಲಯದ ಕಾರ್ಮಿಕರ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದ್ದಾರೆ’ ಎಂದು ಹೇಳಿದರು.