‘ನಾನು ಹಲವು ವರ್ಷಗಳಿಂದ ಚಿಕ್ಕಪೇಟೆಯ ಆಭರಣ ವ್ಯಾಪಾರಿ ಸಚಿನ್ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಮಹಾಲಕ್ಷ್ಮಿಲೇಔಟ್ನಲ್ಲಿರುವ ತಮ್ಮ ಸ್ನೇಹಿತ ಸುನೀಲ್ ಬಳಿ ತೆರಳಿ ₹ 45 ಲಕ್ಷ ಪಡೆದುಕೊಂಡು ಬರುವಂತೆ ಮಾಲೀಕರು ಹೇಳಿದ್ದರು. ಅವರ ಸೂಚನೆಯಂತೆ ಹಣ ತೆಗೆದುಕೊಂಡು ಹೋಗುತ್ತಿದ್ದೆ. ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ’ ಎಂದು ರಾಹುಲ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.