ದುಪ್ಪಟ್ಟು ಹಣ ನೀಡಿ ಪ್ರಯಾಣಿಸಲು ಜನ ಹಿಂದೇಟು ಹಾಕುತ್ತಿದ್ದು ಜನರು ಮತದಾನದಿಂದ ದೂರ ಉಳಿಯುವಂತಾಗಿದೆ. ಈ ರೀತಿ ಏಕಾಏಕಿ ಪ್ರಯಾಣ ದರವನ್ನು ಏರಿಸುವುದು ಅನ್ಯಾಯವಾಗಿದ್ದು ಮತದಾರರ ಮೂಲಭೂತ ಹಕ್ಕನ್ನು ಚಲಾಯಿಸಲು ಅಡ್ಡಿಪಡಿಸಿದಂತಾಗಿದೆ. ಈ ಬಗ್ಗೆ ಚುನಾವಣಾ ಆಯೋಗ, ಸರ್ಕಾರ ತಕ್ಷಣ ಎಚ್ಚೆತ್ತು ಕೆ.ಎಸ್.ಆರ್.ಟಿ.ಸಿ ಸಹಿತ ಖಾಸಗಿ ಬಸ್ ಕಂಪೆನಿಗಳು ಏರಿಕೆ ಮಾಡಿರುವ ದರವನ್ನು ಇಳಿಕೆ ಮಾಡಿ ಮತದಾರರು ದೂರದ ಊರುಗಳಿಂದ ಮತದಾನ ಕೇಂದ್ರಕ್ಕೆ ಬರಲು ಹಾಗೂ ವಾಪಾಸು ತೆರಳಲು ಅನುಕೂಲಕರ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.