ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸ್‌ ಪ್ರಯಾಣದರ ಏರಿಕೆ: ಮತದಾನಕ್ಕೆ ಹಿನ್ನಡೆ’

Last Updated 12 ಮೇ 2018, 5:37 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ವಿಧಾನ ಸಭೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಸರ್ಕಾರ, ಚುನಾವಣಾ ಆಯೋಗವೂ ಮತದಾನ ಹೆಚ್ಚಳಕ್ಕೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಯಲ್ಲಿ ಚುನಾವಣೆಯ ಕುರಿತು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಚುನಾವಣೆಯ ಸಂದರ್ಭ ಮತದಾನ ಮಾಡಲು ಉದ್ಯೋಗ ನಿಮಿತ್ತ ದೂರದ ಊರುಗಳಲ್ಲಿ ವಾಸಿಸುವವರು ಮತದಾನ ಕೇಂದ್ರಗಳಿರುವ ತಮ್ಮ ಊರುಗಳಿಗೆ ಬರಲು ಜನರು ಹೆಚ್ಚಾಗಿ ಬಸ್ಸುಗಳನ್ನು ಅವಲಂಬಿಸಿರುತ್ತಾರೆ. ಈ ಬಾರಿ ಮತದಾನ ಮಾಡಲು ಬರುವವರಿಗೆ ಕೆ.ಎಸ್.ಆರ್.ಟಿ.ಸಿ ಸಹಿತ ಖಾಸಗಿ ಬಸ್ಸ್ ಕಂಪೆನಿಗಳು ಪ್ರಯಾಣ ದರವನ್ನು ಶೇ 40 ರಿಂದ ಶೇ 50 ರವರೆಗೆ ಏಕಾಏಕಿ ಹೆಚ್ಚಿಸಿರುವುದು ನಿರಾಸೆಗೆ ಕಾರಣವಾಗಿದೆ ಎಂದು ಬಿಜೆಪಿ ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ದುಪ್ಪಟ್ಟು ಹಣ ನೀಡಿ ಪ್ರಯಾಣಿಸಲು ಜನ ಹಿಂದೇಟು ಹಾಕುತ್ತಿದ್ದು ಜನರು ಮತದಾನದಿಂದ ದೂರ ಉಳಿಯುವಂತಾಗಿದೆ. ಈ ರೀತಿ ಏಕಾಏಕಿ ಪ್ರಯಾಣ ದರವನ್ನು ಏರಿಸುವುದು ಅನ್ಯಾಯವಾಗಿದ್ದು ಮತದಾರರ ಮೂಲಭೂತ ಹಕ್ಕನ್ನು ಚಲಾಯಿಸಲು ಅಡ್ಡಿಪಡಿಸಿದಂತಾಗಿದೆ. ಈ ಬಗ್ಗೆ ಚುನಾವಣಾ ಆಯೋಗ, ಸರ್ಕಾರ ತಕ್ಷಣ ಎಚ್ಚೆತ್ತು ಕೆ.ಎಸ್.ಆರ್.ಟಿ.ಸಿ ಸಹಿತ ಖಾಸಗಿ ಬಸ್‌ ಕಂಪೆನಿಗಳು ಏರಿಕೆ ಮಾಡಿರುವ ದರವನ್ನು ಇಳಿಕೆ ಮಾಡಿ ಮತದಾರರು ದೂರದ ಊರುಗಳಿಂದ ಮತದಾನ ಕೇಂದ್ರಕ್ಕೆ ಬರಲು ಹಾಗೂ ವಾಪಾಸು ತೆರಳಲು ಅನುಕೂಲಕರ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT