ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಬಂಗಾರೇಶ್ ಹಿರೇಮಠ ರ್ಯಾಲಿಗೆ ಬುಧವಾರ ಚಾಲನೆ ನೀಡಿದರು. ಸುನಿಲ್ ಮರಾಠೆ, ಇಮ್ರಾನ್ ರಾಣೆಬೆನ್ನೂರು ಹಾಗೂ ಇರ್ಫಾನ್ ಪಠಾಣ್ ತಂಡದ ಇತರ ಸದಸ್ಯರಾಗಿದ್ದು, ಎರಡು ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಸಾಗಲಿದ್ದಾರೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದೆಹಲಿಯನ್ನು ಅವರು ಕ್ರಮಿಸಲಿದ್ದಾರೆ.