ಆ ಪತ್ರವನ್ನು ‘ವಿಜಯ್ ದೇವರಕೊಂಡ, ಮೈತ್ರಿ ಮೂವಿ ಮೇಕರ್ಸ್, ಕಮಲಗಿರಿ ಟವರ್ಸ್, ಮಧುರಾನಗರ, ತೆಲಂಗಾಣ’ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮಾಡಿದ್ದ. ಆದರೆ, ವಿಳಾಸದಲ್ಲಿ ಗೊಂದಲವಿದ್ದ ಕಾರಣ ಅದು ನಟನ ಕಚೇರಿ ತಲುಪಿರಲಿಲ್ಲ. ಪತ್ರದ ಹಿಂಬದಿಯಲ್ಲಿ ಆರೋಪಿ ‘ಇನ್ಫೋಸಿಸ್ ಫೌಂಡೇಷನ್’ನ ಹೆಸರು ಬರೆದಿದ್ದ ಕಾರಣ ಪತ್ರ ಸುಧಾ ಮೂರ್ತಿ ಕಚೇರಿಗೇ ಬಂದಿತ್ತು.