ಹಾವೇರಿ: 32 ಜನ ರೈತರ ಮೇಲೆ ಜಿಲ್ಲಾಡಳಿತದಿಂದ ಸುಳ್ಳು ಕೇಸ್ ದಾಖಲಿಸಿರುವುದನ್ನು ಖಂಡಿಸಿ, ಮೊಕದ್ದಮೆ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕುಘಟಕದಿಂದ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರೈತ ಮುಖಂಡ ಮಂಜುನಾಥ ಕದಂ ಮಾತನಾಡಿ, 32 ವರ್ಷಗಳಿಂದ ಸಂಘಟನೆಯು ರೈತರ ಪರವಾಗಿ ಹೋರಾಟಗಳನ್ನುಮಾಡುತ್ತ ನ್ಯಾಯವನ್ನು ಒದಗಿಸಿದೆ. ಹಿಂದಿನ ಜಿಲ್ಲಾಧಿಕಾರಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ 32 ರೈತರ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು 2018ರ ಜುಲೈ 16ರಂದು ಪ್ರತಿಭಟನೆ ನಡೆಸಲಾಗಿತ್ತು. ಹಿಂದಿನ ಜಿಲ್ಲಾಧಿಕಾರಿ ರೈತರ ಮೇಲೆ ಸುಳ್ಳು ಕೇಸ್ ದಾಖಲಿಸಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಎಂದು ಆರೋಪಿಸಿದರು.
ರೈತರ ಪರವಾಗಿ ಮಾತನಾಡುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ರೈತರ ಮೇಲಿನ ಮೊಕದ್ದಮೆ ವಾಪಸು ಪಡೆಯುವಂತೆ ಆಗ್ರಹಿಸಿದರು.
ರೈತ ಮುಖಂಡರಾದ ಸುರೇಶ ಚಲುವಾದಿ, ಹೇಮಣ್ಣ ಕೋಡಿಹಳ್ಳಿ, ಶಿವಬಸಪ್ಪ ಗೋವಿ, ಶಾರಕ್ಕ ಹಿರೇಮಠ, ಸುಮಂಗಲಾ ಇಪ್ಪಿಕೊಪ್ಪ, ನಾಗಪ್ಪ ಬೂದಿಹಾಳ, ಗದಿಗೆಪ್ಪ ಮರಳಿಹಳ್ಳಿ, ಚಂದ್ರಪ್ಪ ನವಲಿ, ನಾಗಪ್ಪ ವಾಲಿಕಾರ, ಅಜ್ಜಪ್ಪ ಕಾಳಶೆಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.