ಬೆಂಗಳೂರು: ರಾಜ್ಯದಲ್ಲಿ 9 ಹೊಸ ತಾಲ್ಲೂಕುಗಳ ರಚನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಂದಾಯ ಆರ್.ವಿ. ದೇಶಪಾಂಡೆ ತಿಳಿಸಿದರು.
ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆಯ ತೇರದಾಳ, ಚಿಕ್ಕಮಗಳೂರಿನ ಕಳಸಾ, ಕೊಡಗು ಜಿಲ್ಲೆಯ ಪೊನ್ನಂಪೇಟೆ, ಕುಶಾಲನಗರ, ವಿಜಯಪುರದ ಆಲಮೇಲ, ದಕ್ಷಿಣ ಕನ್ನಡದ ಮೂಲ್ಕಿ ಹಾಗೂ ಬೆಳಗಾವಿಯ ಯರಗಟ್ಟಿ ಹೊಸ ತಾಲ್ಲೂಕುಗಳು ಎಂದು ಅವರು ಮಾಹಿತಿ ನೀಡಿದರು.