ಲೇಖಕ ಪ್ರೊ.ಜಿ.ಅಶ್ವತ್ಥ ನಾರಾಯಣ, ‘ಆದರ್ಶ ಶಿಕ್ಷಕರು ಅಪರೂಪವಾಗಿದ್ದಾರೆ. ತರಗತಿ ಹಾಗೂ ಶಾಲೆಗೆ ಮಾತ್ರ ಸೀಮಿತರಾಗುತ್ತಿರುವುದು ವಿಪರ್ಯಾಸ. ಈ ಹಿಂದೆ ಶಿಕ್ಷಕರಾದವರು ಬಿಡುವಿನ ವೇಳೆಯಲ್ಲಿ ಕನ್ನಡದ ಸೇವೆ ಮಾಡುತ್ತಿದ್ದರು. ಅದೇ ರೀತಿ, ಸಾಹಿತಿಗಳಲ್ಲಿ ಕೂಡ ಬದಲಾವಣೆ ಗುರುತಿಸಬಹುದು. ಕೆಲ ಸಾಹಿತಿಗಳು ನಿರ್ದಿಷ್ಟ ಸ್ಥಳದಲ್ಲಿ ಕುಳಿತು ಸಾಹಿತ್ಯ ಕೃಷಿ ಮಾಡುತ್ತಾರೆ. ಆದರೆ, ಸಾಮಾಜಿಕ ಕಳಕಳಿ ಇರುವ ಸಾಹಿತಿಗಳು ಸಾಹಿತ್ಯ ಸೃಷ್ಟಿಸುತ್ತಲೇ ವಿವಿಧ ಕಾರ್ಯದಲ್ಲಿ ಸಕ್ರಿಯರಾಗಿರುತ್ತಾರೆ’ ಎಂದರು.