ರಾಜಕೀಯ ಅನುಭವ, ಸಂಸದೀಯ ದಕ್ಷತೆ, ಸಾಮರ್ಥ್ಯ, ಸಾಮಾಜಿಕ ವಿಷಯಗಳಿಗೆ ಸ್ಪಂದನೆ, ಉತ್ತಮ ಆಡಳಿತಕ್ಕೆ ಬದ್ಧತೆ, ಬದಲಾವಣೆಯ ನಿಟ್ಟಿನಲ್ಲಿ ಆಲೋಚನೆ ಆಧಾರದ ಮೇಲೆ ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್, ಕೃಷ್ಣ ಬೈರೇಗೌಡ, ಬಿ.ಕೆ.ಹರಿಪ್ರಸಾದ್, ರಿಜ್ವಾನ್ ಅರ್ಷದ್ ಅವರನ್ನು ಬೆಂಬಲಿಸಲಾಗುತ್ತಿದೆ. ಯುವಕರ ಆಕಾಂಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯಕ್ಕಾಗಿ ತೇಜಸ್ವಿ ಸೂರ್ಯ ಅವರಿಗೆ ಬೆಂಬಲ ಸೂಚಿಸಲಾಗಿದೆ ಎಂದು ಬಿ–ಪ್ಯಾಕ್ ಪ್ರಕಟಣೆ ತಿಳಿಸಿದೆ.