‘ಜ.31ರ ಸಂಜೆ 7 ಗಂಟೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ‘ನಿಮಗೆ ಕೊರಿಯರ್ ಬಂದಿದೆ. ರಾಜರಾಜೇಶ್ವರಿನಗರ ಆರ್ಚ್ ಬಳಿ ಇದ್ದೇವೆ. ಬಂದು ಪಾರ್ಸಲ್ ತೆಗೆದುಕೊಂಡು ಹೋಗಿ’ ಎಂದ. ಆತನ ಮಾತನ್ನು ನಾನು ನಂಬಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮಾವನ ಮಗಳೂ ಕರೆ ಮಾಡಿದಳು. ‘ನಾನೇ ಕೊರಿಯರ್ ಕಳುಹಿಸಿದ್ದೇನೆ. ಹೋಗಿ ತೆಗೆದುಕೊ’ ಎಂದಳು. ಆ ನಂತರ ಆರ್ಚ್ ಬಳಿ ತೆರಳಿದ್ದೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.