ಬೆಂಗಳೂರು: ಹುಡ್ಕೊ ಸಾಲಕ್ಕಾಗಿ ಅಡಮಾನ ಇಟ್ಟಿದ್ದ ಇನ್ನೆರಡು ಕಟ್ಟಡಗಳನ್ನು ಬಿಬಿಎಂಪಿ ಶುಕ್ರವಾರ ಋಣಮುಕ್ತಗೊಳಿಸಲಿದೆ. ರಾಜಾಜಿನಗರದ ಮಾರುಕಟ್ಟೆ ಹಾಗೂ ಟ್ಯಾನರಿ ರಸ್ತೆಯ ಸಂಕೀರ್ಣಗಳು ಋಣಮುಕ್ತವಾಗುವ ಭಾಗ್ಯವನ್ನು ಪಡೆಯಲಿವೆ.
ಬಿಬಿಎಂಪಿಯಿಂದ ಮಾಡಲಾಗಿದ್ದ ಸಾಲಕ್ಕಾಗಿ ಒಟ್ಟಾರೆ 11 ಕಟ್ಟಡಗಳನ್ನು ಅಡಮಾನ ಇಡಲಾಗಿತ್ತು. ಈ ಹಿಂದೆ ನಾಲ್ಕು ಕಟ್ಟಡಗಳನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಲಾಗಿತ್ತು.
ಎರಡೂ ಕಟ್ಟಡಗಳ ಮೇಲಿನ ₹ 169 ಕೋಟಿ ಸಾಲದ ಹೊರೆಯನ್ನು ಬಿಬಿಎಂಪಿ ಶುಕ್ರವಾರ ಇಳಿಸಲಿದೆ. ಇದರಿಂದ ಆರು ಕಟ್ಟಡಗಳು ಋಣಮುಕ್ತ ಹೊಂದಿದಂತೆ ಆಗಲಿದೆ. ಎರಡೂ ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹುಡ್ಕೊ ಸಂಸ್ಥೆಯ ಅಧಿಕಾರಿಗಳು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಹಸ್ತಾಂತರಿಸಲಿದ್ದಾರೆ.