‘ಮಂಗಳವಾರ ಮಧ್ಯಾಹ್ನ ಕಾರು ಚಾಲನೆ ಮಾಡುತ್ತಿದ್ದುದು ಗೌತಮ್. ಆದರೆ, ಅಪಘಾತ ಸಂಭವಿಸಿದ ಬಳಿಕ ಆತ ಪೊಲೀಸರಿಗೆ ಸುಳ್ಳು ಹೇಳಿದ್ದ. ‘ಸಾಗರ್ ಕಾರು ಓಡಿಸುತ್ತಿದ್ದ. ಆತನ ಪುತ್ರ ಸಮರ್ಥ್ ಹಾಗೂ ಪತ್ನಿ ಸಂಧ್ಯಾ ಜತೆನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದೆ’ ಎಂದು ಹೇಳಿಕೆ ಕೊಟ್ಟಿದ್ದ. ಆದರೆ, ಘಟನೆ ವೇಳೆ ಕಾರಿನಲ್ಲಿದ್ದ ‘ರೇಂಜ್ ರೋವರ್’ ಶೋರೂಂನ ಚಾಲಕ ಶಿವಕುಮಾರ್ ಸೋನಿ ವಾಸ್ತವ ಬಹಿರಂಗಪಡಿಸಿದರು’ ಎಂದು ಸಂಚಾರ ವಿಭಾಗದ (ಪಶ್ಚಿಮ) ಡಿಸಿಪಿ ಎಸ್.ಕೆ.ಸೌಮ್ಯಲತಾ
ಹೇಳಿದರು.