‘ಈ ರಸ್ತೆಯಲ್ಲಿ ಒಂದು ಗಂಟೆಗೆ 50ರಿಂದ 60 ವಾಹನಗಳು ಚಲಿಸುತ್ತವೆ. ಶಾಲಾ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ನಿತ್ಯ ಓಡಾಡುತ್ತಾರೆ. ಮುಖ್ಯ ಸಂಪರ್ಕ ರಸ್ತೆ ಇದಾಗಿದೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದರೆ ಓಡಾಡುವ ಜನಕ್ಕೆ ಅಪಾಯವಾಗಲಿದೆ. ಇಂತಹ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಬೇಕು’ ಎಂದು ಬಿಳಿಜಾಜಿ ಗೋವಿಂದರಾಜು ಆಗ್ರಹಿಸಿದರು.