ಲಗುಬಗನೇ ತಿಂಡಿ ಮುಗಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಜಯನಗರದತ್ತ ಧಾವಿಸಿದ ಅವರು, 9.30ಕ್ಕೆ ಕಚೇರಿ ತಲುಪಿದರು. ಅಷ್ಟೊತ್ತಿಗಾಗಲೇ ಕೆಲ ಮುಖಂಡರು, ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು. ಬಿಸಿ ಕಾಫಿ ಹೀರುತ್ತಾ ಪ್ರಮುಖ ದಿನಪತ್ರಿಕೆಗಳತ್ತ ಒಮ್ಮೆ ಕಣ್ಣಾಯಿಸಿದರು. ಆಂಧ್ರಪ್ರದೇಶ ಹಾಗೂ ತೆಲಂಗಾಣ ಚುನಾವಣೆ ಬಗ್ಗೆ ಚರ್ಚೆ ನಡೆಸುತ್ತಲೇ ತಮ್ಮನ್ನು ಭೇಟಿ ಮಾಡಲು ಬಂದ ಮುಖಂಡರು, ಜನರ ಕುಶಲೋಪರಿ ವಿಚಾರಿಸಿದರು.