ತೀವ್ರ ಗಾಯಗೊಂಡಿದ್ದ ವೆಂಕಟೇಶ್, ಚಿಕಿತ್ಸೆ ಪಡೆದುಕೊಂಡಿದ್ದರು. ಅವರ ಹೇಳಿಕೆ ಆಧರಿಸಿ ‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಅಡಿ ಮುನಿರಾಜು, ಸುರೇಶ್, ದೇವರಾಜ್, ಕುಮಾರಸ್ವಾಮಿ, ಭಾಸ್ಕರ್, ಪಿಳ್ಳಯ್ಯ ಹಾಗೂ ಮೂರ್ತಿ ಎಂಬುವರ ವಿರುದ್ಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.