ಬೈಕ್ನಲ್ಲಿ ಬಂದ ಮೀನುಗಾರರನ್ನು ಘಟಪ್ರಭಾ ನದಿಯ ಸೇತುವೆ ಬಳಿ ಅಡ್ಡ ಹಾಕುವ ಗುಂಪು, ’ನಿಮ್ಮಿಂದಲೇ ದೇಶದಲ್ಲಿ ರೋಗ ಹರಡುತ್ತಿದೆ. ಮನೆಯೊಳಗೆ ಇರಲು ಹೇಳಿದರೂ ಕೇಳುತ್ತಿಲ್ಲ. ನಮಗೂ ಹಚ್ಚುತ್ತೀರಿ‘ ಎಂದು ನಿಂದಿಸುತ್ತದೆ. ಈ ವೇಳೆ ವ್ಯಕ್ತಿಯೊಬ್ಬ ಅವರನ್ನು ಕೋಲಿನಿಂದ ಹೊಡೆಯುತ್ತಾನೆ. ನಂತರ ಎಲ್ಲರ ಮೊಬೈಲ್ ಸಂಖ್ಯೆಗಳನ್ನು ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ.