<p><strong>ಬೆಂಗಳೂರು:</strong> ಬಾಗಲಗುಂಟೆ ಸಮೀಪದ ಮಲ್ಲಸಂದ್ರದಲ್ಲಿ ಪೂಜಾ (11) ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಧಾರಾವಾಹಿಯಿಂದ ಪ್ರಚೋದನೆಗೆ ಒಳಗಾಗಿ ಆಕೆ ನೇಣು ಹಾಕಿಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.</p>.<p>ಗೋಬಿ ಮಂಚೂರಿ ವ್ಯಾಪಾರ ಮಾಡುವ ರಂಗೇಗೌಡ, ಶಾರದಾ ದಂಪತಿ ಮಗಳಾದ ಪೂಜಾ, ಮನೆ ಸಮೀಪದ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಳು.</p>.<p>ಎಂದಿನಂತೆ ಸೋಮವಾರ ಸಂಜೆ ದಂಪತಿ ವ್ಯಾಪಾರಕ್ಕೆ ತೆರಳಿದ್ದರು. 7 ಗಂಟೆವರೆಗೂ ಅವರ ಜತೆಗೇ ಇದ್ದ ಪೂಜಾ, ನಂತರ ಮನೆಗೆ ವಾಪಸಾಗಿದ್ದಳು. 8 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆಯೊಬ್ಬರು ಆಕೆಯನ್ನು ನೋಡಿದ್ದರು. ಆನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ವಹಿವಾಟು ಮುಗಿಸಿ ಪೋಷಕರು 9 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ಗೊತ್ತಾಗಿದೆ. ಬಟ್ಟೆ ನೇತು ಹಾಕುವ ಹುಕ್ಕಿಗೆ ಟವೆಲ್ ಕಟ್ಟಿ ನೇಣು ಹಾಕಿಕೊಂಡಿದ್ದಳು. ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.</p>.<p><strong>ಧಾರಾವಾಹಿಯ ಪ್ರಭಾವ?</strong>: ಆಂಧ್ರಪ್ರದೇಶದ ದಂಪತಿ, 15 ವರ್ಷಗಳಿಂದ ನಗರದಲ್ಲೇ ನೆಲೆಸಿದ್ದರು. ಧಾರಾವಾಹಿಗಳನ್ನು ಹೆಚ್ಚಾಗಿ ನೋಡುತ್ತಿದ್ದ ಪೂಜಾ, ರಾತ್ರಿಯೂ ತಾಯಿಗೆ ಅದೇ ಕಾರಣ ಹೇಳಿ ಮನೆಗೆ ಮರಳಿದ್ದಳು. ಪೋಷಕರು ಮನೆಗೆ ವಾಪಸಾದಾಗಲೂ ಟಿ.ವಿ ಚಾಲೂ ಇತ್ತು. ಉದಯ ವಾಹಿನಿಯಲ್ಲಿ ಧಾರಾವಾಹಿ ಕೂಡ ಪ್ರಸಾರವಾಗುತ್ತಿತ್ತು ಎನ್ನಲಾಗಿದೆ.</p>.<p>‘ಬಾಲಕಿ ಮನೆಯಲ್ಲಿದ್ದಾಗ ಹೊರಗಿನ ವ್ಯಕ್ತಿಗಳು ಯಾರೂ ಬಂದು ಹೋಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ, ಅದು ಆತ್ಮಹತ್ಯೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಧಾರಾವಾಹಿಯ ಯಾವುದೋ ಒಂದು ದೃಶ್ಯದಿಂದ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದು. ಹೀಗಾಗಿ, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಾಗಲಗುಂಟೆ ಸಮೀಪದ ಮಲ್ಲಸಂದ್ರದಲ್ಲಿ ಪೂಜಾ (11) ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಧಾರಾವಾಹಿಯಿಂದ ಪ್ರಚೋದನೆಗೆ ಒಳಗಾಗಿ ಆಕೆ ನೇಣು ಹಾಕಿಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.</p>.<p>ಗೋಬಿ ಮಂಚೂರಿ ವ್ಯಾಪಾರ ಮಾಡುವ ರಂಗೇಗೌಡ, ಶಾರದಾ ದಂಪತಿ ಮಗಳಾದ ಪೂಜಾ, ಮನೆ ಸಮೀಪದ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಳು.</p>.<p>ಎಂದಿನಂತೆ ಸೋಮವಾರ ಸಂಜೆ ದಂಪತಿ ವ್ಯಾಪಾರಕ್ಕೆ ತೆರಳಿದ್ದರು. 7 ಗಂಟೆವರೆಗೂ ಅವರ ಜತೆಗೇ ಇದ್ದ ಪೂಜಾ, ನಂತರ ಮನೆಗೆ ವಾಪಸಾಗಿದ್ದಳು. 8 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆಯೊಬ್ಬರು ಆಕೆಯನ್ನು ನೋಡಿದ್ದರು. ಆನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ವಹಿವಾಟು ಮುಗಿಸಿ ಪೋಷಕರು 9 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ಗೊತ್ತಾಗಿದೆ. ಬಟ್ಟೆ ನೇತು ಹಾಕುವ ಹುಕ್ಕಿಗೆ ಟವೆಲ್ ಕಟ್ಟಿ ನೇಣು ಹಾಕಿಕೊಂಡಿದ್ದಳು. ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.</p>.<p><strong>ಧಾರಾವಾಹಿಯ ಪ್ರಭಾವ?</strong>: ಆಂಧ್ರಪ್ರದೇಶದ ದಂಪತಿ, 15 ವರ್ಷಗಳಿಂದ ನಗರದಲ್ಲೇ ನೆಲೆಸಿದ್ದರು. ಧಾರಾವಾಹಿಗಳನ್ನು ಹೆಚ್ಚಾಗಿ ನೋಡುತ್ತಿದ್ದ ಪೂಜಾ, ರಾತ್ರಿಯೂ ತಾಯಿಗೆ ಅದೇ ಕಾರಣ ಹೇಳಿ ಮನೆಗೆ ಮರಳಿದ್ದಳು. ಪೋಷಕರು ಮನೆಗೆ ವಾಪಸಾದಾಗಲೂ ಟಿ.ವಿ ಚಾಲೂ ಇತ್ತು. ಉದಯ ವಾಹಿನಿಯಲ್ಲಿ ಧಾರಾವಾಹಿ ಕೂಡ ಪ್ರಸಾರವಾಗುತ್ತಿತ್ತು ಎನ್ನಲಾಗಿದೆ.</p>.<p>‘ಬಾಲಕಿ ಮನೆಯಲ್ಲಿದ್ದಾಗ ಹೊರಗಿನ ವ್ಯಕ್ತಿಗಳು ಯಾರೂ ಬಂದು ಹೋಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ, ಅದು ಆತ್ಮಹತ್ಯೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಧಾರಾವಾಹಿಯ ಯಾವುದೋ ಒಂದು ದೃಶ್ಯದಿಂದ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದು. ಹೀಗಾಗಿ, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>