‘ದಸರಾ ಆಚರಣೆ ಯಾವುದೇ ಒಂದು ಇಲಾಖೆಗೆ ಸೀಮಿತವಾದುದಲ್ಲ. ಯಾರನ್ನೋ ಮೆಚ್ಚಿಸಲು ಮುಂದಾಗಬೇಡಿ. ನಿಮ್ಮ ಆತ್ಮ ತೃಪ್ತಿಗೆ ಕೆಲಸ ಮಾಡಿ. ಇಂತಹ ಅವಕಾಶ ಎಲ್ಲರಿಗೂ ಸಿಗಲ್ಲ. ಪುಷ್ಪಾಲಂಕಾರ, ವಿದ್ಯುತ್ ದೀಪಾಲಂಕಾರ, ವೃತ್ತಗಳ ಅಲಂಕಾರ ವಿಭಿನ್ನವಾಗಿರಲಿ. ರೈತ ದಸರಾ, ಮಹಿಳಾ ದಸರಾ, ಯುವ ದಸರಾ ಜನರನ್ನು ಆಕರ್ಷಿಸುವಂತಿರಲಿ’ ಎಂದು ಸಂಬಂಧಿಸಿದ ಸಮಿತಿ ಸದಸ್ಯರಿಗೆ ಸೂಚಿಸಿದರು.