ನಟಿ ತಾರಾ ಅನೂರಾಧ, ‘ರಾಜಕುಮಾರ್ ಅವರಿಗೆ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿತ್ತು. ಆದರೆ, ರಾಜಕುಮಾರ್,ಮೊದಲು ಕುವೆಂಪು ಅವರಿಗೆ ಪ್ರಶಸ್ತಿ ಕೊಡಿ ಎಂದಿದ್ದರು. ಕುವೆಂಪು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿಮಗೆ (ರಾಜಕುಮಾರ್ಗೆ) ಈ ಪ್ರಶಸ್ತಿ ಕೊಟ್ಟು ನಂತರ ಅವರಿಗೆ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಅದಕ್ಕೊಪ್ಪದ ಅವರು, ‘ನೀವು ಆರೋಗ್ಯವಾಗಿದ್ದೀರಲ್ಲವೇ. ಅವರಲ್ಲಿಗೆ (ಕುವೆಂಪು ಬಳಿಗೆ) ಹೋಗಿ ಪ್ರಶಸ್ತಿ ನೀಡಿ’ ಎಂದು ಸೂಚಿಸಿದ್ದರು’ ಎಂದು ಸ್ಮರಿಸಿದರು.