ನಿರ್ಗತಿಕರನ್ನು ಗುರುತಿಸಲು ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಬಿಬಿಎಂಪಿ ಹಾಗೂ ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು, ಶುಕ್ರವಾರ ರಾತ್ರಿ ನಗರದಲ್ಲೆಲ್ಲ ಸಂಚರಿಸಿದರು. ಪ್ರತಿನಿಧಿಗಳಿಗೆ ತಮ್ಮ ಕಷ್ಟ ಹೇಳಿಕೊಂಡ ಈರಮ್ಮ, ‘ನಿತ್ಯವೂ ರಸ್ತೆಬದಿಯಲ್ಲೇ ತಿಂಡಿ, ಊಟ ಮಾಡಿ ಬದುಕುತ್ತಿದ್ದೇವೆ. ನಮ್ಮವರು ಅಂತಾ ಯಾರೂ ಇಲ್ಲ. ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ನಮ್ಮ ಕಷ್ಟ ಹೇಳತೀರದು’ ಎಂದು ಕಣ್ಣೀರಿಟ್ಟರು.