ಬೆಂಗಳೂರು: ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ಯುಸೂಫ್ ಅಬ್ದುಲಾಹಿ (32) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ರಾಮಮೂರ್ತಿ ನಗರ ಬಳಿಯ ಕಲ್ಕೆರೆಯ ಮುನಿತಾಯಪ್ಪ ಲೇ ಔಟ್ನಲ್ಲಿ ವಾಸವಿದ್ದ ಯುಸೂಫ್, ಮನೆಯಲ್ಲಿಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಲಾಯಿತು. ₹ 5 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ವಿದ್ಯಾಭ್ಯಾಸ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ, ತಮಿಳುನಾಡಿನ ವ್ಯಕ್ತಿಯೊಬ್ಬರಿಂದ ಗಾಂಜಾವನ್ನು ನಗರಕ್ಕೆ ತರುತ್ತಿದ್ದ. ತನ್ನದೇ ವ್ಯವಸ್ಥಿತ ಜಾಲದ ಮೂಲಕ ಪರಿಚಿತರಿಗೆ ಮಾತ್ರ ಗಾಂಜಾ ಮಾರುತ್ತಿದ್ದ’ ಎಂದರು.
‘ಆರೋಪಿಯ ಮನೆಯಲ್ಲಿ ಎರಡು ಮೊಬೈಲ್, ಪಾಸ್ಪೋರ್ಟ್, ವಿದ್ಯುತ್ ಚಾಲಿತ ತೂಕದ ಯಂತ್ರ ಸಿಕ್ಕಿದೆ. ಆತನ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.