ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬೈಕ್ಗೆ ತಮ್ಮ ಬೈಕ್ ಗುದ್ದಿಸಿದ ಇಬ್ಬರು ಅಪರಿಚಿತರು, 40 ಗ್ರಾಂ ತೂಕದ ಚಿನ್ನದ ಸರ ಮತ್ತು 10 ಗ್ರಾಂ ತೂಕದ ಉಂಗುರ ಎಗರಿಸಿ ಪರಾರಿಯಾದ ಘಟನೆ ಪಣತ್ತೂರು ರೈಲ್ವೆ ಸೇತುವೆ ಬಳಿ ನಡೆದಿದೆ. ಚಿನ್ನಾಭರಣ ಕಳೆದುಕೊಂಡ ನಂಜಾ ರೆಡ್ಡಿ ವರ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.