‘ಕೊಲೆ ಮಾಡುವುದಕ್ಕಾಗಿಯೇ ಅವರು ಟಾಟಾ ಸುಮೊವೊಂದನ್ನ ಖರೀದಿಸಿದ್ದರು. ಕೊಲೆ ಮಾಡಿದ ನಂತರ ಇನ್ನೊಂದು ವಾಹನದಲ್ಲಿ ಬೆಳಗಾವಿಗೆ ಹೋಗಿ ಅಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಿದ್ದರು. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ಬಂಧಿಸಲು ಇನ್ಸ್ಪೆಕ್ಟರ್ಗಳಾದ ಎಸ್.ಬಿ. ಮಾಳಗೊಂಡ, ವಿಜಯ ಬಿರಾದಾರ, ಟಿ. ವೆಂಕಟಸ್ವಾಮಿ ಹಾಗೂ ಎಸ್ಐಗಳಾದ ನವೀನ ಜಕ್ಕಲಿ, ಮಂಜುಳಾ ಅವರನ್ನು ಒಳಗೊಂಡ ಮೂರು ತಂಡ ರಚಿಸಲಾಗಿತ್ತು. ವೈಜ್ಞಾನಿಕವಾಗಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.