ಸುತ್ತಮುತ್ತಲಿನ ಜನ ಕೆರೆಯನ್ನು ಒತ್ತುವರಿ ಮಾಡಿಕೊಂಡುಹೊಲ–ಗದ್ದೆಗಳನ್ನು ಮಾಡಿಕೊಂಡಿದ್ದರು. ಇದನ್ನು ಕಂಡ ಯುವಕರು ಕೆರೆ ಜಾಗವನ್ನು ಸರ್ವೇ ಮಾಡಿಸಿ, ಈಗ ಕೆರೆಗೆ ಮೂಲರೂಪ ನೀಡಿದ್ದಾರೆ.
‘ಪ್ರತಿಯೊಬ್ಬರ ಮನೆಯಿಂದ ಒಬ್ಬರು ಶ್ರಮದಾನ ಮಾಡಲು ಬಂದರು. ಗುದ್ದಲಿ ಹಿಡಿದು ಹೂಳು ತೆಗೆದರು. ಮನೆಯಲ್ಲಿದ್ದ ಟ್ರ್ಯಾಕ್ಟರ್ಗಳಿಂದ ಹೂಳು ಸಾಗಿಸಿದರು. ನಯಾ ಪೈಸೆ ನೀರಿಕ್ಷೆ ಮಾಡದೇ ಊರ ಕೆರೆಯನ್ನು ಉಳಿಸಿಕೊಳ್ಳಬೇಕೆಂಬ ಮನೋಭಾವದಿಂದ ಎಲ್ಲರೂ ಶ್ರಮದಾನ ಮಾಡಿದರು. ಕೆಲವು ದಾನಿಗಳು ಮುಂದೆ ಬಂದು ಸಹಾಯ ನೀಡಿದರು. ಗ್ರಾಮಸ್ಥರು ಒಗ್ಗಟ್ಟಿನ ಶ್ರಮದಾನದಿಂದ ಕೆರೆ ಕಂಗೊಳಿಸುತ್ತಿದೆ’ ಎನ್ನುವುದು ಯುವ ಪಡೆಯ ಅನಿಸಿಕೆ.
‘ಕೆರೆ ಅಭಿವೃದ್ಧಿ ಪಡಿಸಲು ಸರ್ಕಾರದ ಮೊರೆ ಹೋಗಿದ್ದರೆ ಕೆಲಸ ವಿಳಂಬವಾಗುತ್ತಿತ್ತು. ಈ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ನಿಲ್ಲುವಂತಾಗಲು ಕೆಲಸ ಆರಂಭಿಸಿದೆವು. ನೀರಿದ್ದರೆ ಸುತ್ತಲಿನ ಭೂ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿ ಕೃಷಿ ಚಟುವಟಿಕೆಗೆ ಹೆಚ್ಚು ಅನುಕೂಲವಾಗುತ್ತದೆ. ಈ ಬಾರಿ ಉತ್ತಮ ಮಳೆ ಬಂದರೆ ನಮ್ಮ ಬದುಕು ಹಸನಾಗುತ್ತದೆ’ ಎನ್ನುವ ಭರವಸೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.