‘ಚೌಕಿದಾರ್ ಚೋರ್ ಹೈ‘ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ಗಾಂಧಿ ಸುಳ್ಳು ನುಡಿದು ಬಳಿಕ ಕ್ಷಮೆ ಯಾಚಿಸಿದರು. ಈಗ ಕಾಂಗ್ರೆಸ್ ಪಕ್ಷ ತಿರುಚಿದ ಚಿತ್ರ ಪೋಸ್ಟ್ ಮಾಡಿರುವುದೂ ಅಪರಾಧವಾಗುತ್ತದೆ. ಶ್ರೀವತ್ಸ ತಮ್ಮ ಪ್ರೊಫೈಲ್ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ಉಸ್ತುವಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಆದ್ದರಿಂದ, ಈ ಕೃತ್ಯಕ್ಕೆ ಕಾಂಗ್ರೆಸ್ ಪಕ್ಷವೂ ಹೊಣೆ ಹೊರಬೇಕು ಎಂದು ದೂರಿನಲ್ಲಿ ಬಿಜೆಪಿ ಹೇಳಿದೆ.