ಉದ್ಯಮಿ ₹ 12 ಕೋಟಿ ತೆರಿಗೆ, ದಂಡ ಕಟ್ಟಬೇಕಿತ್ತು. ಇದರ ಜೊತೆಗೆ ಬಡ್ಡಿಯನ್ನೂ ಪಾವತಿಸಬೇಕಿತ್ತು. ಆದರೆ, ಯಾವುದನ್ನೂ ಪಾವತಿಸದೆ ತಮ್ಮ ಆಸ್ತಿ ವರ್ಗಾವಣೆ ಮಾಡಿ ವಿದೇಶಕ್ಕೆ ಹೊರಟಿದ್ದರು ಎಂದು ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ. ತೆರಿಗೆ ಬಾಕಿ ಪಾವತಿಸದೆ ಆಸ್ತಿ ವರ್ಗಾವಣೆ ಮಾಡುವುದು ಆದಾಯ ತೆರಿಗೆ ಕಾಯ್ದೆಗೆ ವಿರುದ್ಧವಾದ ಕ್ರಮ. ಈ ಕಾರಣಕ್ಕೆ ಉದ್ಯಮಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.