ಬಿ ಪ್ಯಾಕ್ ಮಂಗಳವಾರ ಆಯೋಜಿಸಿದ್ದ ಸಂವಾದಕ್ಕೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಗೈರಾಗಿದ್ದರು. ‘ಅಧಿಕೃತ ಆಹ್ವಾನ ಇಲ್ಲದ ಕಾರಣ ಅವರು ಪೂರ್ವ ನಿರ್ಧಾರಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸಂವಾದಕ್ಕೆ ಬರಲಾಗಲಿಲ್ಲ’ ಎಂದು ಸದಾನಂದಗೌಡರ ಆಪ್ತ ಸಹಾಯಕರು ತಿಳಿಸಿದ್ದರು.