‘ಸಂಘವು ನಷ್ಟದಲ್ಲಿದೆ ಎಂಬ ಕಾರಣಕ್ಕೆ 2018ರ ಏಪ್ರಿಲ್ನಿಂದ ಜಾರಿಗೆ ಬರಬೇಕಾದ 6ನೇ ವೇತನ ಶ್ರೇಣಿಯನ್ನು 2019ರ ಏಪ್ರಿಲ್ನಿಂದ ಜಾರಿಗೊಳಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಆದರೆ, 2020ರ ಜನವರಿಯಿಂದ ಜಾರಿಗೊಳಿಸುವುದಾಗಿ ಆಡಳಿತಾಧಿಕಾರಿ ಹೇಳುತ್ತಿದ್ದಾರೆ. 6ನೇ ವೇತನ ಶ್ರೇಣಿ ಜಾರಿಯಾಗದಿದ್ದಲ್ಲಿ ಎಚ್.ಡಿ. ದೇವೇಗೌಡರ ನಿವಾಸದ ವರೆಗೆ ಪ್ರತಿಭಟನೆ ನಡೆಸಲಾಗುವುದು ’ ಎಂದು ಒಕ್ಕೂಟದ ಕಾರ್ಯದರ್ಶಿ ಆರ್. ರಂಗರಾಜು ತಿಳಿಸಿದರು.