ಖುರಂಪಾಷಾ ವಿರುದ್ಧ ಶಿವಾಜಿನಗರ, ರಾಮಮೂರ್ತಿನಗರ, ಹಲಸೂರು ಸೇರಿ ಕೆಲವು ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಜೈಲು ಸೇರಿದ್ದ ಈತ, ಜನವರಿಯಲ್ಲಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದರು. ಜೈಲಿನಿಂದ ಹೊರಬಂದ ಬಳಿಕ ಖುರಂಪಾಷಾ, ಪರಿಚಿತರಾದ ಅಬ್ರಹಾರ್ ಮತ್ತು ಸಬೀಲ್ಗೆ ಹಣದ ಆಮಿಷ ಒಡ್ಡಿ ತನ್ನ ಕೃತ್ಯಕ್ಕೆ ನೆರವಾಗುವಂತೆ ಮನವೊಲಿಸಿದ್ದ. ಬಳಿಕ ಈ ಮೂವರೂ ಸೇರಿ, ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು.