ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದ ನೂರು ದಿನಗಳ ಒಳಗೆ ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ ₹ 15 ಲಕ್ಷ ಹಾಕುತ್ತೇನೆ ಎಂದರು. ಆದರೆ ಐದು ವರ್ಷವಾದರೂ ಒಂದೇ ಒಂದು ರೂಪಾಯಿ ಕಪ್ಪು ಹಣ ತಂದಿಲ್ಲ. ಆರ್ಬಿಐ ಸಹಮತಿ ಇಲ್ಲದೆ ನೋಟು ಅಮಾನ್ಯ ಮಾಡಿದರು, ಪರಿಣಾಮ ಹೊಸ ನೋಟು ಮುದ್ರಣ ಹಾಗೂ ಸಾಗಣೆಗೆ ₹ 38 ಸಾವಿರ ಕೋಟಿ ಖರ್ಚಾಯಿತು. ಶೇ 100ರಷ್ಟು ಹಣವನ್ನು ಜನರು ಬದಲಾಯಿಸಿಕೊಂಡರು’ ಎಂದರು.