ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ನಿಂದ ಹೊಡೆದು ಹತ್ಯೆ; ನಾಲ್ವರ ಸೆರೆ

Last Updated 27 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಸ್‌ಮಸ್ ಸಂಭ್ರಮಾಚರಣೆ ವೇಳೆ ಪಾನಮತ್ತ ಯುವಕರ ಮಧ್ಯೆ ಶುರುವಾದ ಜಗಳ ಜಗದೀಶ್ (28) ಎಂಬುವರ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಈ ಸಂಬಂಧ ದೇವರಜೀವನಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೇವರಜೀವನಹಳ್ಳಿಯ ದೊಡ್ಡಣ್ಣ ನಗರದ ಅರುಣ್, ಶರತ್, ಜಾನ್‌ ಪೀಟರ್ ಹಾಗೂ ಅಪ್ಪು ಎಂಬುವರನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ 10.30ರ ಸುಮಾರಿಗೆ ‘ಸೆವೆಂತ್ ಡೇ ಚರ್ಚ್‌’ ಬಳಿ ಗಲಾಟೆ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪೇಂಟರ್ ಆಗಿದ್ದ ಜಗದೀಶ್, ಆ ದಿನ ರಾತ್ರಿ ಪಾನಮತ್ತರಾಗಿ ಚರ್ಚ್ ಬಳಿ ಬಂದಿದ್ದರು. ಇದೇ ವೇಳೆ ಆರೋಪಿಗಳೂ ಅಲ್ಲೇ ನಿಂತಿದ್ದರು. ಅರುಣ್‌ನನ್ನು ಕರೆದ ಜಗದೀಶ್, ‘ಇಷ್ಟೊತ್ತಿಗೆ ಇಲ್ಲಿ ಏನು ಮಾಡುತ್ತಿದ್ದೀಯಾ? ಬೇಗ ಮನೆಗೆ ಹೋಗೋಕೆ ಆಗಲ್ವ’ ಎಂದಿದ್ದರು. ಆ ಮಾತನ್ನು ಆತ ಕಿವಿ ಮೇಲೆ ಹಾಕಿಕೊಳ್ಳದೆ ತೆರಳಿದ್ದರಿಂದ ಸಿಟ್ಟಾದ ಜಗದೀಶ್, ವೇದಿಕೆ ನಿರ್ಮಾಣಕ್ಕೆ ಹಾಕಲಾಗಿದ್ದ ಪೈಪ್ ತೆಗೆದುಕೊಂಡು ಅರುಣ್‌ನ ಕೈಗೆ ಹೊಡೆದಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT