ಪೇಂಟರ್ ಆಗಿದ್ದ ಜಗದೀಶ್, ಆ ದಿನ ರಾತ್ರಿ ಪಾನಮತ್ತರಾಗಿ ಚರ್ಚ್ ಬಳಿ ಬಂದಿದ್ದರು. ಇದೇ ವೇಳೆ ಆರೋಪಿಗಳೂ ಅಲ್ಲೇ ನಿಂತಿದ್ದರು. ಅರುಣ್ನನ್ನು ಕರೆದ ಜಗದೀಶ್, ‘ಇಷ್ಟೊತ್ತಿಗೆ ಇಲ್ಲಿ ಏನು ಮಾಡುತ್ತಿದ್ದೀಯಾ? ಬೇಗ ಮನೆಗೆ ಹೋಗೋಕೆ ಆಗಲ್ವ’ ಎಂದಿದ್ದರು. ಆ ಮಾತನ್ನು ಆತ ಕಿವಿ ಮೇಲೆ ಹಾಕಿಕೊಳ್ಳದೆ ತೆರಳಿದ್ದರಿಂದ ಸಿಟ್ಟಾದ ಜಗದೀಶ್, ವೇದಿಕೆ ನಿರ್ಮಾಣಕ್ಕೆ ಹಾಕಲಾಗಿದ್ದ ಪೈಪ್ ತೆಗೆದುಕೊಂಡು ಅರುಣ್ನ ಕೈಗೆ ಹೊಡೆದಿದ್ದರು’ ಎಂದು ಹೇಳಿದರು.