ರಾಬಿನ್ ಪತ್ನಿ ಜೊತೆ ಅನೈತಿಕ ಸಂಬಂಧಕ್ಕೆ ತನ್ವೀರ್ ಒತ್ತಾಯಿಸು ತ್ತಿದ್ದ. ಇದೇ ವಿಚಾರಕ್ಕೆ ರಾಬಿನ್ ಮತ್ತು ತನ್ವೀರ್ ನಡುವೆ ಜಗಳವಾಗಿತ್ತು. ಅಷ್ಟಾದರೂ ಆರೋಪಿ, ನಿತ್ಯವೂ ದಂಪತಿ ಮಲಗುತ್ತಿದ್ದ ಜಾಗಕ್ಕೆ ಬಂದು ಕಿರುಕುಳ ನೀಡುತ್ತಿದ್ದ. ಇದೇ ಸಿಟ್ಟಿನಲ್ಲಿ ಕಲ್ಲು ತೆಗೆದುಕೊಂಡು ಬಂದು ರಾಬಿನ್ ತಲೆ ಮೇಲೆ ಎತ್ತಿ ಹಾಕಿ ತನ್ವೀರ್ ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ವಿಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.