‘12 ದಿನಗಳಿಗೊಮ್ಮೆ ನೀರು ಬರುತ್ತಿದೆ. ನೀರು ಬಂದಾಗಲಾದರೂ ತುಂಬಿಕೊಳ್ಳೋಣ ಎಂದರೆ ಕೆಲವೇ ನಿಮಿಷಗಳ ನಂತರ ಬಂದ್ ಮಾಡುತ್ತಾರೆ. ಮಾಜಿ ಕಾರ್ಪೋರೇಟರ್, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನಾ ಆಗಿಲ್ಲ. ಕುಡಿಯಲು ನೀರು ಇಲ್ಲದಿದ್ದರೆ, ಜೀವನ ಸಾಗಿಸುವುದು ಹೇಗೆ’ ಎಂದು ಪೂಜಾ ವಾಡೇಕರ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.